ಉಜಿರೆ ಹಳೆಪೇಟೆ ಬಳಿ ಮತ್ತೆ ರಸ್ತೆಗುರುಳಿದ ಮರ: ತಪ್ಪಿದ ಭಾರಿ ಅಪಾಯ

Suddi Udaya

ಉಜಿರೆ: ಉಜಿರೆ ಪೇಟೆಯ ಮಾವಂತೂರು ರೆಸಿಡೆನ್ಸಿ ಬಳಿ ರಾಷ್ಟ್ರೀಯ ಹೆದ್ದಾರಿಯ ವಾಹನದ ಮೇಲೆ ಮರವೊಂದು ಬಿದ್ದು ಅವಘಡ ಸಂಭವಿಸಿದ ಬೆನ್ನಿಗೇ ಇದೀಗ ಹಳೆಪೇಟೆ ಡೆಲ್ಮಾ ಸೇನಿಟರಿ ಮಳಿಗೆಯ ಎದುರು ಜೂ.26 ರಂದು ಅಕೇಶಿಯಾ ಮರವೊಂದು ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿದೆ.

ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಅವರು ಸಿಬ್ಬಂದಿಗಳ ಸಮೇತ ಆಗಮಿಸಿ ರಸ್ತೆ ಸಂಚಾರ ಕಾರ್ಯಾಚರಣೆ ನಡೆಸಿದರು.
ಎಸ್‌ಡಿಟಿಯು ಅಟೋ ಯುನಿಯನ್ ನ ಪದಾಧಿಕಾರಿಗಳು ತಕ್ಷಣ ಮರವು ತೆರವುಗೊಳಿಸಿ ಕ್ರಮ ಕೈಗೊಂಡರು. ಕೊಯ್ಯೂರು ಕುಂಟಿನಿ ರಝಾಕ್ ಅವರು ಯಂತ್ರದ ಮೂಲಕ ಮರ ಕತ್ತರಿಸಲು ಸಹಕರಿಸಿದರು. ಅಷ್ಟರಲ್ಲಿ ಹೈವೇ ಕಾಮಗಾರಿ ನಡೆಸುವವರ ಕಡೆಯಿಂದ ಜೆಸಿಬಿ ಬಂದು ತುಂಡರಿಸಿದ ಮರಗಳನ್ನು ಬದಿಗೆ ಸರಿಸುವ ಕ್ರಮ‌ಕೈಗೊಂಡರು.

Leave a Comment

error: Content is protected !!