ನಿಡ್ಲೆ: ರಸ್ತೆಗೆ ಮರದ ಗೆಲ್ಲು ಬಿದ್ದು ಸಂಚಾರ ಅಸ್ತವ್ಯಸ್ಥ

Suddi Udaya

ನಿಡ್ಲೆ : ಇಲ್ಲಿಯ ಪಜಿಲ ಧರ್ನಪ್ಪ ಗೌಡರವರ ಮನೆ ಬಳಿ ರಸ್ತೆಗೆ ಜೂ. 26ರಂದು ಬೆಳಗ್ಗಿನ ಜಾವ ಮರದ ಗೆಲ್ಲು ಬಿದ್ದು ಸಂಚಾರಕ್ಕೆ ತೊಡಕ್ಕಾಗಿ ಸೈಡ್ ನಿಂದ ವಾಹನ ಚಲಿಸುವಾಗ ಬಸ್ ವೊಂದು ಕೆಸರಿನಲ್ಲಿ ಸಿಲುಕಿದ್ದು ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹೋಮ್ ಗಾರ್ಡ್ ವಸಂತ ಗೌಡ ನಿಡ್ಲೆ ಹಾಗೂ ನಿಡ್ಲೆ -ಕಳೆಂಜ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಗಿರೀಶ್ ಗೌಡ ಬಾರಗುಡ್ಡೆ, ಕೊರಗಪ್ಪ ಗೌಡ ಪರಹಿತ್ತಿಲು, ಲಿಂಗಪ್ಪ ಗೌಡ ಕೋಲಡ್ಕ, ಚಂದ್ರಶೇಖರ ಗೌಡ ಒಂಟ್ಯಾನ, ಸೇರಿ ಮರದ ಗೆಲ್ಲನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

Leave a Comment

error: Content is protected !!