September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕುಂಭಶ್ರೀ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆ

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು ವಾರದಲ್ಲಿ ಒಂದು ದಿನ ಕರಾಟೆ, ಯೋಗಸನ ,ಸಂಗೀತ ,ಡ್ಯಾನ್ಸ್ ಯಕ್ಷಗಾನ, ಭರತನಾಟ್ಯ ತರಬೇತಿಗಳನ್ನು ನುರಿತ ತರಬೇತುದಾರರಿಂದ ನೀಡಲಾಗುತ್ತಿದೆ. ಅದೇ ರೀತಿ ನಮ್ಮ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ರವರ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿಸರ, ಸಾಂಸ್ಕೃತಿಕ ,ಭಾಷಾ ಸಮಾಜ ,ಎನ್ ಸಿ ಸಿ ಸೇವಾದಳ ಹಲವಾರು ವಿಭಾಗಗಳಾಗಿ ವಿಂಗಡಿಸಲಾಯಿತು.

ಆಯಾಯ ಕ್ಲಬ್ ನ ಶಿಕ್ಷಕರು ನಾಯಕರನ್ನು ಆಯ್ಕೆ ಮಾಡಿ ಗುಂಪಿನ ಹೆಸರನ್ನು ಚಾರ್ಟಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಸಹಕಾರದಿಂದ ವಿವಿಧ ರೀತಿಯಲ್ಲಿ ಅಲಂಕಾರಗೊಳಿಸಿ, ಕ್ಲಬ್ ನ ಸಂಯೋಜಕರಾದ ಉಪನ್ಯಾಸಕಿ ಪ್ರಜ್ಞ, ಶಿಕ್ಷಕಿ ಗೌತಮಿ, ಶಿಕ್ಷಕಿ ಭವಾನಿ ದಿವ್ಯ ಇವರ ಮುಂದಾಳತ್ವದಲ್ಲಿ ಉದ್ಘಾಟಿಸಲಾಯಿತು. ಕಬ್ಬಿನ ಶಿಕ್ಷಕರಾದಂತಹ ಸಾಂಸ್ಕೃತಿಕ ಕ್ಲಬ್ -ವಿನಯ್ ಮತ್ತು ಅಕ್ಷತ , ವಿಜ್ಞಾನ ಕ್ಲಬ್-ವಾಣಿ ಮತ್ತು ಉಷಾ, ಭಾಷಾ ಕ್ಲಬ್-ಮಮತಾ ಮತ್ತು ಮನೋಹರ್, ಸೇವಾದಳ ಕ್ಲಬ್ -ಶುಭ ಮತ್ತು ಚೈತ್ರ ಶ್ರೀ, ಪರಿಸರ ಕ್ಲಬ್ -ಶ್ವೇತಾ ಮತ್ತು ಸುಜಾತ, ಎನ್‌ ಸಿ ಸಿ -ಪವಿತ್ರ ಮತ್ತು ಸುಮನ್, ಸಮಾಜ ಕ್ಲಬ್- ಶ್ವೇತಾ ಮತ್ತು ಅಕ್ಷತ ಇವರು ಮಕ್ಕಳಿಗೆ ಪ್ರೋತ್ಸಾಹಿಸಿದರು.

Related posts

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

Suddi Udaya

ಕುಕ್ಕೇಡಿ ಬುಲೆಕ್ಕಾರ ಶಾಲೆಯ ಮಕ್ಕಳಿಂದ ನೇಜಿ ನಾಟಿ

Suddi Udaya

ವಸಂತ ಬಂಗೇರರ ಹುಟ್ಟುಹಬ್ಬ ಪ್ರಯುಕ್ತ ನಡೆಯುವ ರಕ್ತದಾನ ಮತ್ತು ಕಬಡ್ಡಿ ಪಂದ್ಯಾಟಗಳಲ್ಲಿ ಭಾಗವಹಿಸುವಂತೆ ಪ್ರೀತಿತಾ ಬಂಗೇರ ಮನವಿ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ : 10 ತಿಂಗಳು ಕಳೆದರೂ ಕಾರ್ಮಿಕರಿಗೆ ಸಿಗದ ಕೂಲಿ, ಬಾಡಿಗೆ

Suddi Udaya

ಸಜ್ಜನಿಕ ನಡೆ, ಸಂಘರ್ಷದ ಹೋರಾಟ, ಸೌಜನ್ಯಯುತ ರಾಯಭಾರಿತ್ವ ಹೊಂದಿದ ಅಪರೂಪದ ರಾಜಕಾರಣಿ ವಸಂತ ಬಂಗೇರ – ಶಾಸಕ ಹರೀಶ್ ಪೂಂಜ

Suddi Udaya

ಕುಕ್ಕೇಡಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಅನಿತಾ, ಉಪಾಧ್ಯಕ್ಷರಾಗಿ ಕುಸುಮ ಆಯ್ಕೆ

Suddi Udaya
error: Content is protected !!