ವಿಪರೀತ ಮಳೆ : ತೆಕ್ಕಾರು ಅತಿಜಮ್ಮ ರವರ ಮನೆಯ ಮಹಡಿ ಸಂಪೂರ್ಣ ಹಾನಿ

Suddi Udaya

ತೆಕ್ಕಾರು: ವಿಪರೀತ ಮಳೆಯಿಂದ ತೆಕ್ಕಾರು ಗ್ರಾಮದ ಬೊಳಲುಗುಡ್ಡೆ ಅತಿಜಮ್ಮ ರವರ ಮನೆಯ ಮಹಡಿಯು ಸಂಪೂರ್ಣ ಹಾನಿಯಾದ ಘಟನೆ ಜೂ.26 ರಂದು ನಡೆದಿದೆ.

ಮನೆಯಲ್ಲಿ 4 ಸಣ್ಣ ಪುಟ್ಟ ಮಕ್ಕಳು ಇದ್ದು ಮನೆಯ ಒಳಗಡೆ ವಿಪರೀತ ನೀರು ಸೋರುತ್ತಿದ್ದು ನಿಲ್ಲಲು ಅಸಾಧ್ಯವಾಗಿದೆ.

ಸ್ಥಳಕ್ಕೆ ತೆಕ್ಕಾರು ಗ್ರಾ.ಪಂ ಅಧ್ಯಕ್ಷರು, ಬಾರ್ಯ ಗ್ರಾಮಲೆಕ್ಕಾಧಿಕಾರಿ ಸಾಕಮ್ಮ, ತೆಕ್ಕರು ಸಹಕಾರಿ ಸಂಘದ ಅಧ್ಯಕ್ಷರಾದ ಅಬ್ದುಲ್ ರಜಾಕ್ , ಗ್ರಾ.ಪಂ. ಸದಸ್ಯರಾದ ಹಕೀಂ, ಬಿಎಸ್ ಎ ಹಾರಿಸ್ ಭೇಟಿ ನೀಡಿದರು.

Leave a Comment

error: Content is protected !!