July 23, 2026
ಗ್ರಾಮಾಂತರ ಸುದ್ದಿ

ನಾವೂರು ಕೈಕಂಬ ಪ್ರದೇಶದ ಲಾಯಿಲ- ಕಿಲ್ಲೂರು ಪಿಡ್ಲೂಡಿ ರಸ್ತೆ ಬದಿಯ ಚರಂಡಿಯಲ್ಲಿ ತುಂಬಿದ ಹೂಳು:ಚರಂಡಿ ಹೂಳು ತೆಗೆದ ಯುವ ಉದ್ಯಮಿ ಅನಿಲ್ ಎಂ.ಜೆ ನರ್ನೊಟ್ಟು : ಸಾರ್ವಜನಿಕರ ಪ್ರಶಂಸೆ

ನಾವೂರು ಗ್ರಾಮದ ಕೈಕಂಬ ಪ್ರದೇಶದ ಲಾಯಿಲ- ಕಿಲ್ಲೂರು ಪಿಡ್ಲೂಡಿ ರಸ್ತೆ ಬದಿಯ ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ರಸ್ತೆಯಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಯುವ ಉದ್ಯಮಿ ಅನಿಲ್ ಎಂ.ಜೆ ನರ್ನೊಟ್ಟು ತನ್ನ ಸ್ವಂತ ಜೆಸಿಬಿ ಮೂಲಕ ಚರಂಡಿ ಹೂಳು ತೆಗೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ನಾವೂರು ಗ್ರಾಮದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು , ಮಳೆಯ ನೀರು ಚರಂಡಿಯಲ್ಲಿ ಹರಿಯುವ ಬದಲಿಗೆ ರಸ್ತೆಯಲ್ಲಿ ಹರಿಯುತ್ತಿತ್ತು. ಮಳೆಗಾಲ ಆರಂಭಕ್ಕೆ ಮುನ್ನ ಚರಂಡಿಯ ಹೂಳು ಎತ್ತಿ ಮಳೆಯ ನೀರು ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡಬೇಕಾದ

ನಾವೂರು ಗ್ರಾಮ ಪಂಚಾಯತ್ ಮತ್ತು ಪಿಡ್ಲೂಡಿ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸಿತ್ತು. ಇದರಿಂದ ಬೆಸೆತ್ತ ನಾವೂರು ಗ್ರಾಮದ ಯುವ ಉದ್ಯಮಿ ಅನಿಲ್ ಎಂ.ಜೆ ರವರು ತನ್ನ ಸ್ವಂತ ಜೆಸಿಬಿ ಮೂಲಕ ಚರಂಡಿಯ ಹೂಳು ಎತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಅವರಿಗೆ ಸ್ಥಳೀಯ ಉದ್ಯಮಿಗಳು ಹಾಗೂ ರಿಕ್ಷಾ ಚಾಲಕ , ಮಾಲೀಕರು ಸಾಥ್ ನೀಡಿದರು.

ಉದ್ಯಮಿ ಅನಿಲ್ ಎಂ.ಜೆ ಅವರಿಗೆ ಕೈಕಂಬ ಜನರಲ್ ಸ್ಟೋರ್ ನ ಕೃಷ್ಣಪ್ಪ ಗೌಡ ದಡ್ಡು , ಕೋಟ್ಯಾನ್ ಚಿಕನ್ ಸೆಂಟರ್ ನ ಪ್ರವೀಣ್ ಕೋಟ್ಯಾನ್ , ರಿಕ್ಷಾ ಚಾಲಕ , ಮಾಲೀಕರಾದ ಓಬಯ್ಯ ಗೌಡ ಕುಂಡಡ್ಕ , ದಿನೇಶ್ ಗೌಡ ಕುಪ್ಲೋಟ್ಟು , ನವೀನ್ ಪೂಜಾರಿ ಮಲ್ಲಡ್ಕ , ಸಂತೋಷ್ ಕುಲಾಲ್ ಕಾರಿಂಜ , ಮೋಹನ್ ಕೊರಂಡ , ವಿಶ್ವನಾಥ ಉಲ್ಲಂಜ , ಸ್ಥಳೀಯರಾದ ಸುರೇಂದ್ರ ಪೂಜಾರಿ ಕೈಕಂಬ ಸಹಕಾರ ನೀಡಿದರು. ಉದ್ಯಮಿ ಅನಿಲ್ ಎಂ.ಜೆ ಹಾಗೂ ಸ್ಥಳೀಯರ ಕಾರ್ಯ ನಾವೂರು ಗ್ರಾಮ ಪಂಚಾಯತ್ ಹಾಗೂ ಪಿಡ್ಲೂಡಿ ಇಲಾಖೆಗೆ ಮುಜುಗರ ಪಡುವಂತೆ ಆಗಿದೆ.

Related posts

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ: ಅಡಕೆ ನಿಷೇಧದ ಆತಂಕ ನಿವಾರಣೆಗೆ ಪ್ರಯತ್ನ

Suddi Udaya

ಪದ್ಮುಂಜ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ರವರಿಗೆ ಮಂಗಳೂರು ಹೈಕೋರ್ಟ್ ಪೀಠ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅಭಿನಂದನೆ

Suddi Udaya

ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು ಜಿಲ್ಲಾ ಸಮಿತಿಯ ಸಭೆ

Suddi Udaya

ಬೆಳಾಲು: ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ; ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹ್ಯಾಂಡ್ ಬಾಲ್ ಪಂದ್ಯಾಟ: ಸಂತ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳ ಅದ್ಭುತ ಸಾಧನೆ, ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!