ಪದ್ಮುಂಜ: ಕ್ವಾಟ್ರಸ್ ಪುದ್ದೊಟ್ಟು ದೇವಸ್ಥಾನ ಹೋಗುವ ಜಿ.ಪಂ. ರಸ್ತೆ ಬದಿ ಅನಧಿಕೃತವಾಗಿ ಹಾಕಿದ್ದ ಬೇಲಿಯನ್ನು ತೆರವುಗೊಳಿಸಿದ ಕಂದಾಯ ಇಲಾಖೆ

Suddi Udaya

ಕಣಿಯೂರು: ಇಲ್ಲಿಯ ಪದ್ಮುಂಜ ಕ್ವಾಟ್ರಸ್ ಪುದ್ದೊಟ್ಟು ದೇವಸ್ಥಾನ ಹೋಗುವ ಜಿಲ್ಲಾ ಪಂಚಾಯತ್ ಸೇರಿದ ರಸ್ತೆ ಬದಿ ಖಾಸಗಿ ವ್ಯಕ್ತಿ ಅನಧಿಕೃತವಾಗಿ ಬೇಲಿ ಹಾಕಲಾಗಿದ್ದು ಪಂಚಾಯತ್ ನೋಟಿಸ್ ನೀಡಿದರು ತೆರವುಗೊಳಿಸದೆ. ತದನಂತರ ತಹಶೀಲ್ದಾರರಿಗೆ ನೋಟಿಸ್ ನೀಡಿದಾಗ ಕಂದಾಯ ಅಧಿಕಾರಿಗಳು ಬಂದು ಅನಾಧಿಕೃತ ಬೇಲಿಯನ್ನು ಕಂದಾಯ ಇಲಾಖೆಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಹಾಗೂ ಗ್ರಾಮಕಾರಣಿಕ ಉಷಾ ಜು.1ರಂದು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಯಶವಂತ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್. ಪಂಚಾಯತ್ ಸದಸ್ಯರಾದ ಅಮಿತ್., ಗಾಯತ್ರಿ ಹಾಗೂ ಸ್ಥಳೀಯರು ಉಪಸ್ಥಿತಿಯಲ್ಲಿ ತೆರವುಗೊಳಿಸಲಾಯಿತು.

Leave a Comment

error: Content is protected !!