ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ಬೆಳ್ತಂಗಡಿ: ಶಿಬಾಜೆಯ ಮಾದರಿಯಲ್ಲಿ ಮರಣ ಮೃದಂಗಕ್ಕೆ ಅಣಿಯಾಗಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಯ ಒಳಗಡೆ ವಿದ್ಯುತ್ ಕಂಬಕ್ಕೆ ಮರದ ಕೊಂಬೆ ಸುತ್ತುವರೆದು ಕಂಬಕ್ಕೆ ಸಪೋರ್ಟ್ ಆಗಿ ಹಾಕಿರುವ ಸ್ನೇ ವಯ‌ರ್, ಇನ್ನು ಅದೆಷ್ಟು ಬಲಿಗೆ ಕಾಯುತ್ತಿದೆಯೋ ಎಂದು ‘ಸುದ್ದಿ ಉದಯ’ ಆನ್ ಲೈನ್ ವರದಿಗೆ ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಗೆಲ್ಲನ್ನು ತೆರವು ಗೊಳಿಸುವಂತೆ
ಬೆಳ್ತಂಗಡಿ ಮೆಸ್ಕಾಂ ಸಹಾಯಕ ಕಾರ್ಯಪಾಲಿಕ ಅಭಿಯಂತರರಾದ
ಕ್ಲೆಮೆಂಟ್ ಬೆಂಜಮೀನ್ ಬ್ರ್ಯಾಕ್ಸ್
ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಅಧಿಕಾರಿಗಳು ಕೂಡಲೇ ಬಂದು. ಮರದ ಗೆಲ್ಲುಗಳನ್ನು ತೆರವು ಗೊಳಿಸಿ ಮಳೆಯಲ್ಲಿ ಆಗಬಹುದಾದ ಸಂಭವಿಯ ಅಪಾಯವನ್ನು ತಪ್ಪಿಸಿ ಸಾವ೯ಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Leave a Comment

error: Content is protected !!