ಮಡಂತ್ಯಾರು ಹೈಸ್ಕೂಲ್ ರೀಯೂನಿಯನ್ ವತಿಯಿಂದ ಇತ್ತೀಚೆಗೆ ನಿಧನರಾದ ಡೇವಿಡ್ ಡಿಸೋಜಾರಿಗೆ ಶ್ರದ್ಧಾಂಜಲಿ

Suddi Udaya

ಮಡಂತ್ಯಾರು : ಹೈಸ್ಕೂಲ್ ರೀಯೂನಿಯನ್ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಡೇವಿಡ್ ಡಿಸೋಜ ಇವರ ಶ್ರದ್ಧಾಂಜಲಿ ಸಭೆಯು ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ “ಕ್ಷೀರಾಂಬುಧಿ” ಸಭಾಂಗಣದಲ್ಲಿ ನಡೆಯಿತು.

ಸಹಪಾಠಿಗಳೊಂದಿಗೆ ಶಾಲಾ ದಿನಗಳಲ್ಲಿ ವಿದ್ಯೆಯನ್ನ ಧಾರೆ ಎರೆದ ಗುರುಗಳಾದ ಜೆರಾಲ್ಡ್ ಮೊರಾಸ್ , ಹೆರಾಲ್ಡ್ ಡಿಸೋಜ , ಜೆರಾಲ್ಡ್ ಡಿಸೋಜ, ಶ್ರೀಮತಿ ಶಾಂತಿ ಮೇರಿ ಡಿಸೋಜ ಇವರುಗಳು ಅಗಲಿದ ಡೇವಿಡ್ ಡಿಸೋಜ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೆರಾಲ್ಡ್ ಮೊರಾಸ್ ಹಾಗೂ ಹೆರಾಲ್ಡ್ ಡಿಸೋಜ ರವರು ಶಿಷ್ಯನ ಅಗಲಿಕೆಯ ನೋವಿನೊಂದಿಗೆ ಶಾಲಾ ಸಮಯಗಳಲ್ಲಿ ಶ್ರೀಯುತರು ಇದ್ದ ರೀತಿಯ ಅನುಭವ ಹಂಚಿಕೊಂಡರು.

ಸಂಸ್ಥೆಯ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆಯವರು ಮಾತನಾಡಿ ಗೆಳೆಯನ ಅಗಲುವಿಕೆಯಿಂದ ಸಮಾಜಕ್ಕೆ, ಕುಟುಂಬಕ್ಕೆ ಮಾತ್ರವಲ್ಲದೆ ಹೈಸ್ಕೂಲ್ ರೀಯೂನಿಯನ್ ತಂಡದ ಕೊಂಡಿ ಕಳಚಿದಂತಾಯಿತು. ಇಂತಹ ಸಂದರ್ಭದಲ್ಲಿ ಈ ನೋವನ್ನು ಬರಿಸುವ ಶಕ್ತಿಯನ್ನು ಆ ದೇವರು ಎಲ್ಲರಿಗೂ ಕರುಣಿಸಲೆಂದು ನುಡಿ ನಮನ ಸಲ್ಲಿಸಿದರು.
ಶ್ರೀಮತಿ ಶಾಂತಿ ಪ್ರಿಯ ಪಿಂಟೋ ಮಾತನಾಡಿ ಗೆಳೆತನದ ಅನುಭವನ್ನು ಹಂಚಿಕೊಂಡರು. ಡೆಸ್ಮಂಡ್ ಜೋಯೆಲ್ ಕಾರ್ಯಕ್ರಮ ನಿರೂಪಿಸಿ, ಸಂಪತ್ ಕುಮಾರ್ ಧನ್ಯವಾದವಿತ್ತರು.
ಸಂತೋಷದ ಸಂದರ್ಭದಲ್ಲಿ ಮಾತ್ರ ಅಲ್ಲಾ ದುಃಖದ ಸಮಯದಲ್ಲೂ ಹೈಸ್ಕೂಲ್ ರೀ ಯೂನಿಯನ್ ಮಡಂತ್ಯಾರು ಸದಾ ಸ್ಪಂದಿಸುತ್ತದೆ ಎನ್ನುವುದನ್ನು ಎಲ್ಲಾ ಸಹಪಾಠಿಗಳು ಶ್ರದ್ಧಾಂಜಲಿ ಸಮರ್ಪಿಸುವ ಮುಖೇನ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದಂತಾಗಿದೆ.

Leave a Comment

error: Content is protected !!