ಲಾಯಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ: ಲಾಯಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ವತಿಯಿಂದ ನಡೆಯುವ 36 ನೇ ವರುಷದ ಸಾರ್ವಜನಿಕ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ವಿಘ್ನೇಶ್ವರ ಕಲಾಮಂದಿರದಲ್ಲಿ ನಡೆಯಿತು..

ಪ್ರಧಾನ ಕಾರ್ಯದರ್ಶಿಯಾಗಿ ರುಕ್ಮಯ ಕನ್ನಾಜೆ ಮುಂದುವರಿದು ನೂತನ ಅಧ್ಯಕ್ಷರಾಗಿ ಆರ್.ರಮೇಶ್ ಲಾಯಿಲ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಅರವಿಂದ್ ಕುಮಾರ್ ರಾಘವೇಂದ್ರ ನಗರ, ಕೋಶಾಧಿಕಾರಿಯಾಗಿ ಸುರೇಂದ್ರ ಎಲ್.ಜೆ, ಉಪಾಧ್ಯಕ್ಷರಾಗಿ ಪ್ರಕಾಶ್ ಕಾಶಿಬೆಟ್ಟು, ಗಂಗಾಧರ್ ಹೆಗ್ಡೆ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಗಣೇಶ್ ಲಾಯಿಲ, ಚಿನ್ನಯ ಕುಲಾಲ್, ಅನ್ನದಾನ ಸಮಿತಿ ಸಂಚಾಲಕರಾಗಿ ಸುರೇಶ್ ಬರೆಮೇಲು , ಸದಸ್ಯರಾಗಿ ಅನಿಲ್ ಕಕ್ಕೇನ, ಸುಜಿತ್ ಗುರಿಂಗಾನ, ಸೀತಾರಾಮ ಹೆಗ್ಡೆ, ಶಶಿಕುಮಾರ್ ಅಯೋಧ್ಯನಗರ ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.
ಸಮಿತಿಯ ಹಿರಿಯ ಸಲಹೆಗಾರರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.

Leave a Comment

error: Content is protected !!