ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ಡಿ.ಎಂ ಪ.ಪೂ‌ ಕಾಲೇಜಿನ‌ ಕನ್ನಡ ಸಂಘ ಉದ್ಘಾಟನೆ

ಬೆಳ್ತಂಗಡಿ: ಕನ್ನಡ ಸಂಘದ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸೀಮಿತವಾಗದೆ ಇಡೀ ವರ್ಷ ಕವಿಗೋಷ್ಠಿ, ಚಿಂತನ ಮಂಥನ, ಕವಿ ವಿಮರ್ಷೆ, ಭಿತ್ರಿ ಪತ್ರ ರಚನೆ, ವ್ಯಕ್ತಿ ಆಧರಿತ ಉಪನ್ಯಾಸ ಮಾಲಿಕೆ ಮುಂತಾದ ಯೋಜನೆಗಳೊಂದಿಗೆ ನಡೆದು ವರ್ಷಾಂತ್ಯಕ್ಕೆ ‘ವಿದ್ಯಾರ್ಥಿ ಸಮ್ಮೇಳನ’ ರೀತಿಯಲ್ಲಿ ಸಮಾರೋಪಗೊಳ್ಳುವಂತಾಗಬೇಕು ಎಂದು ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ, ಪತ್ರಕರ್ತ ಅಚ್ಚು ಮುಂಡಾಜೆ ಅಭಿಪ್ರಾಯಪಟ್ಟರು.

ಉಜಿರೆ ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ಜು.10 ರಂದು ನಡೆದ ಕನ್ನಡ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಿಚಾರಗಳನ್ನೇ ಸಂವೇದನಾ ಶೀಲ ಮನೋಭಾವದಿಂದ ಕಂಡು ಲೇಖನ, ಕವನಗಳ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಬೇಕು. ಪದಗಳ ಸಂಗ್ರಹಕ್ಕಾಗಿ ಓದುವ ಹವ್ಯಾಸ ಬಹುಮುಖ್ಯ. ಇಂಗ್ಲೀಷ್ ನಲ್ಲಿ ಕಲಿತರೆ ಮಾತ್ರ ಉನ್ನತ ಅವಕಾಶ ಎಂಬ ಮೊದಲಿಸುವಿಕೆ ತೊಲಗಿಸಿ ಕನ್ನಡಕ್ಕೂ ಭವಿಷ್ಯವಿದೆ ಎಂದು ತಮ್ಮ ಬರಹ, ವಿಮರ್ಷೆ, ಕವನ, ಸಾಹಿತ್ಯ‌ ರಚನೆ‍ಯ ಮೂಲಕ ತೋರಿಸಿಕೊಡಬಹುದು ಎಂದರು. ಭಾಷಣದ ಕೊನೆಗೆ ಅವರು ಸ್ವರಚಿತ ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ, ಇಂತಹಾ ಸಂಘಗಳಿಂದ ವಿದ್ಯಾರ್ಥಿಗಳಲ್ಲಿ ವಿಚಾರ ಆಸಕ್ತಿ ಹಾಗೂ ಪ್ರತಿಭೆ ಹೊರಬರಲು ಕಾರಣವಾಗುತ್ತದೆ. ಇದೂ ಅಲ್ಲದೆ ವರ್ಷ ಸ್ಪರ್ಧೆ, ಭಿತ್ತಿ‌ಪತ್ರಿಕೆ ‌ಮೊದಲಾದವುಗಳ ಮೂಲಕ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ‌ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು.
ಹಸೀನಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಸಂಕೇತ್ ಸ್ವಾಗತಿಸಿದರು. ಕುಶ ಅತಿಥಿ ಪರಿಚಯ ಮಾಡಿದರು. ಸಾಕ್ಷಿ ನಿರೂಪಿಸಿದರು. ತೇಜನ್ ವಂದಿಸಿದರು.

Related posts

ಉಜಿರೆ: ಅಭ್ಯಾಸ್ ಪಿ ಯು ಕಾಲೇಜಿನಲ್ಲಿ ಇಕೋ ಕ್ಲಬ್ ಫೌಂಡೇಶನ್ ತರಬೇತಿ

Suddi Udaya

ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನ ನೂತನ ಮೂರ್ತಿ ಮೆರವಣಿಗೆ,ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರೆವಣಿಗೆ- ತೋರಣ ಮುಹೂರ್ತ, ಭಜನಾ ಕಾರ್ಯಕ್ರಮಕ್ಕೆ ಚಾಲನೆ-ಸಹಸ್ರಾರು ಭಕ್ತರು ಭಾಗಿ

Suddi Udaya

ಕೃಷಿ ಮಾಡಿ ಜೀವನ ನಡೆಸಲು 2 ಎಕರೆ ಡಿಸಿ ಮನ್ನಾ ಭೂಮಿ ನೀಡಿ , ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ನಾಯಕರುಗಳ ಆಗ್ರಹ

Suddi Udaya

ನಿಟ್ಟಡೆ: ಕುಂಭಶ್ರೀ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ಸಂಕಲ್ಪ-2025’ ಓರಿಯಂಟೇಶನ್

Suddi Udaya

ಬೆಳ್ತಂಗಡಿ ಬಂಗೇರ ಬಿಗ್ರೇಡ್ ವತಿಯಿಂದ ಶ್ರೀಮತಿ ಬಿನುತಾ ಬಂಗೇರರ ಸಾರಥ್ಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ನಾರಾವಿ: ಹಿರ್ತೋಟ್ಟು ಮೀನಗುಂಡಿಗೆ ವಿಷ: ಅಪಾರ ಪ್ರಮಾಣದ ಮೀನುಗಳ ಸಾವು

Suddi Udaya
error: Content is protected !!