ಬೆಳ್ತಂಗಡಿಯ ಜೈನ ಬಸದಿಗಳಿಗೆ ಅನುದಾನ ಬಿಡುಗಡೆ

Suddi Udaya

ಬೆಳ್ತಂಗಡಿ: ಕರ್ನಾಟಕ ಸರಕಾರದಿಂದ ಮತ್ತೊಮ್ಮೆ ಜೈನ ಬಸದಿಗಳಿಗೆ ಅನುದಾನ ಬಿಡುಗಡೆ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಸದಿಗಳ ಪುನರುತ್ಥಾನಕ್ಕೆ ಹಣ ಬಿಡುಗಡೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಬಸದಿಯ ಜೀರ್ಣೋದ್ಧಾರಕ್ಕೆ ರೂ.50 ಲಕ್ಷ, ಸವಣಾಲು ಕ್ಷೇತ್ರದ ಅಭಿವೃದ್ಧಿಗೆ ರೂ.9 ಲಕ್ಷ, ಪುದುವೆಟ್ಟು ಬಸದಿಗೆ ರೂ.50 ಲಕ್ಷ ಹಣವನ್ನು ಬಿಡುಗಡೆಯನ್ನು ಕರ್ನಾಟಕ ಸರಕಾರ ಮಾಡಿರುತ್ತದೆ.
ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಹಾಗೂ ಬೆಳ್ತಂಗಡಿ ತಾಲೂಕಿನ ಬಸದಿಗಳಿಗೆ ಹಣ ಬಿಡುಗಡೆಗೆ ಸಹಕಾರ ನೀಡಿದ ರಕ್ಷಿತ್ ಶಿವರಾಮ್ ಅವರಿಗೆ ಬೆಳ್ತಂಗಡಿ ಜೈನ ಸಮಾಜ ಧನ್ಯವಾದಗಳನ್ನು ತಿಳಿಸುತ್ತದೆ ಎಂದು ಡಾ. ಜಯಕೀತಿ೯ ಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!