ಜು.21: ಲಾಲಿತ್ಯೋದ್ಯಾನ ಕವನ ಸಂಕಲನ ಬಿಡುಗಡೆ

Suddi Udaya

ಬೆಳ್ತಂಗಡಿ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ಪದಗ್ರಹಣ ಸಮಾರಂಭದಲ್ಲಿ ನಾಟ್ಯ ಶಾಂತಲೆ ಲಾಲಿತ್ಯ ಕುಮಾರ್ ಇವರ ಪರಿಚಯಗಳನ್ನೊಳಗೊಂಡ ಕವನ ಸಂಕಲನ ಲಾಲಿತ್ಯೋದ್ಯಾನ ಜು.21 ರಂದು ಬಿಡುಗಡೆಗೊಳ್ಳಲಿದೆ.

ಆಮಂತ್ರಣ ಸಂಸ್ಥೆಯಿಂದ ಮೊದಲ ಭಾರಿಗೆ ಸಂಪಾದಕ ಮಂಡಳಿ ರಚಿಸಿ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಲಾಗುತ್ತಿದ್ದು, ಜು 21 ರಂದು ನೇತ್ರಾವತಿ ಪ್ರಣವ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.
ಪ್ರಧಾನ ಸಂಪಾದಕರಾಗಿ ರಶ್ಮೀ ಸನಿಲ್ ಮಂಗಳೂರು, ಸಂಪಾದಕರಾಗಿ ಹೆಚ್ಕೆ ನಯನಾಡು, ಸಹ ಸಂಪಾದಕರಾಗಿ ಉಮಾ ಸುನಿಲ್ ಹಾಸನ, ಸ್ವಾತೀ ಸೂರಜ್ ಶಿಶಿಲ, ನವ್ಯಪ್ರಸಾದ್ ನೆಲ್ಯಾಡಿ ಸಹಕರಿಸಿದ್ದಾರೆ ಎಂದು ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

Leave a Comment

error: Content is protected !!