23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಗೀನಿಯರ ಸುವರ್ಣ ಸಂಭ್ರಮ: ಧರ್ಮಾಧ್ಯಕ್ಷರಿಂದ ಗೌರವ ಮತ್ತು ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪವಿತ್ರ ಹೃದಯ ಭಗೀನಿಯರ ಮೇರಿ ಮಾತಾ ರಿಜಿಯನ್‌ನ ನಾಲ್ವರು ಭಗೀನಿಯರ ವೃತ ಸ್ವೀಕಾರದ ಸುವರ್ಣ ಸಂಭ್ರಮ ಮತ್ತು ರಜತ ಸಂಭ್ರಮವನ್ನು ನೆಲ್ಯಾಡಿಯಲ್ಲಿ ಆಚರಿಸಲಾಯಿತು. “ಆದ್ಯಾತ್ಮ ಮತ್ತು ಸೇವೆಯ ಮೂಲಕ ಭಗೀನಿಯರು ಪ್ರಭು ಯೇಸುಕ್ರಿಸ್ತನ ಜೀವನ ಮತ್ತು ಅವರ ಬದುಕಿನ ನೇರ ಪ್ರಾತ್ಯಕ್ಷತೆ ತಮ್ಮ ಬದುಕಿನಲ್ಲಿ ಒದಗಿಸುತ್ತಿದ್ದಾರೆ,” ಎಂದು ಇವರನ್ನು ಅಭಿನಂದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.

ಸಮಾರಂಭದಲ್ಲಿ ಸಿಸ್ಟರ್ ಫಿಲೋಮಿನ ಕುರಿಯನ್ ಮತ್ತು ಸಿಸ್ಟರ್ ಆನಿ ಕುರಿಯನ್ ಸುವರ್ಣ ಸಂಭ್ರಮವನ್ನು ಹಾಗೂ ಸಿಸ್ಟರ್ ಮೇಬಿಲ್ ಜೋನ್ ಮತ್ತು ಸಿಸ್ಟರ್ ಜಿನ್ಸಿ ರೋಸ್ ರಜತ ಮಹೋತ್ಸವವನ್ನು ಆಚರಿಸಿದರು. ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಹಾಗೂ ರಿಜಿನಲ್ ಸುಪೀರಿಯರ್ ಲಿಸ್ ಮಾತ್ಯು ಶುಭ ಕೋರಿದರು. ಹೆಗ್ಗಳದ ವಂದನೀಯ ಫಾ. ರೋಷನ್ ಪುದುಶೇರಿ ಮತ್ತು ಬಜಗೋಳಿಯ ಫಾ. ತೋಮಸ್ ಪಾರೆಕಾಟ್ಟಿಲ್ ಬಲಿಪೂಜೆಯಲ್ಲಿ ಭಾಗವಹಿಸಿದರು. ವಂದನೀಯ ಸಿಸ್ಟರ್ ಎಲ್ಸಿಲಿಟ್, ಸಿಸ್ಟರ್ ಬ್ಲೆಸಿಮರಿಯ, ಸಿಸ್ಟರ್ ಆಲ್ಫಿ, ಸಿಸ್ಟರ್ ತೆರೆಸ್ ಕುರಿಯನ್, ಸಿಸ್ಟರ್ ಆಲಿಸ್, ಸಿಸ್ಟರ್ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

ತೆಕ್ಕಾರು : ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಪತಿ

Suddi Udaya

ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

Suddi Udaya

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಹಾಗೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕೃತ ರವಿಚಂದ್ರ ಸಾಲಿಯಾನ್ ರವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ ಕಾರ್ಯಕ್ರಮ

Suddi Udaya

ರೋಟರಿ ಸಮುದಾಯ ದಳ ಕಲ್ಮಂಜ ಘಟಕದ ಪದಾಧಿಕಾರಿಗಳ ಆಯ್ಕೆ

Suddi Udaya

ಹತ್ಯಡ್ಕ : ಶ್ರೀ ವಿಠೋಬ ರಕುಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರಿಂದ ರೂ.5 ಲಕ್ಷ ದೇಣಿಗೆ

Suddi Udaya

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ

Suddi Udaya
error: Content is protected !!