ಮಂಗಳೂರು ಭವಿಷ್ಯ ನಿಧಿ ಕಚೇರಿಗೆ ಪಿ.ಎಫ್. ಬೋರ್ಡನ ಕೇಂದ್ರೀಯ ಸದಸ್ಯ ಹಿರಣ್ಮಯಿ ಪಾಂಡ್ಯ ಭೇಟಿ

Suddi Udaya

Updated on:

ಬೆಳ್ತಂಗಡಿ: ಮಂಗಳೂರು ಭವಿಷ್ಯ ನಿಧಿ ಕಚೇರಿಗೆ ಪಿ.ಎಫ್ ಬೋರ್ಡನ ಕೇಂದ್ರೀಯ ಸದಸ್ಯರಾದ ಹಿರಣ್ಮಯಿ ಪಾಂಡ್ಯ ಭೇಟಿ ನೀಡಿ ಮಾತನಾಡಿ ಪಿಎಫ್ ವಿಚಾರದಲ್ಲಿ ಮಾಹಿತಿ ಸಂಗ್ರಹ ಮತ್ತು ಸಲಹೆ, ಮಾರ್ಗದರ್ಶನವನ್ನು ಕೇಂದ್ರೀಯ ಬೋರ್ಡ್ ನ ಮಾನದಂಡಗಳನ್ನು ಪಾಲಿಸಬೇಕು. ಅಲ್ಲದೆ ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ನಮ್ಮ ಬಳಿ ಬರುವ ಪಲಾನುಭವಿಗಳಿಗೆ ಒಳ್ಳೆಯ ರೀತಿಯ ಸೇವೆಯನ್ನು ನೀಡಿ ಅವರಿಂದ ಶಹಾಬ್ಬಾಸ್ ಗಿರಿ ಪಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ರಿಜಿನಲ್ ಕಮಿಷನರ್ ರಿನಾ ಮೆನನ್, ಮಂಗಳೂರು ರಿಜಿನಲ್ ಪಿಎಫ್ ಬೋರ್ಡ್ ನ ಸದಸ್ಯರಾದ ವಿಶ್ವನಾಥ್ ಶೆಟ್ಟಿ, ಬಿ ಎಂ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೆಚ್ ಎಲ್, ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು, ಕಾರ್ಯದರ್ಶಿ, ಗೋಪಾಲ ಕೃಷ್ಣ, ಜಿಲ್ಲಾ ಪ್ರಮುಖರಾದ ಕುಮಾರ್ ನಾಥ್, ಉಮೇಶ್, ಉದಯ ಕುಮಾರ್, ಶಶಿಧರ್ ಉಪಸ್ಥಿತರಿದ್ದರು.

Leave a Comment

error: Content is protected !!