ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಡೆಂಗ್ಯೂ ತಡೆಗಟ್ಟುವ ಅಭಿಯಾನ

Suddi Udaya

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆ ಪರಿಸರದ ಶಾಲಾ ಕಾಲೇಜುಗಳಲ್ಲಿ ಡೆಂಗ್ಯೂ ತಡೆಗಟ್ಟುವ ಬಗ್ಗೆ ಮಾಹಿತಿ ನೀಡುವ ಅಭಿಯಾನ ನಡೆಯಿತು.

ಸ್ವಯಂ ಸೇವಕರರಾದ ಐಶ್ವರ್ಯ , ಧನುಶ್ರೀ , ಆದಿತ್ಯ , ಯಕ್ಷಿತ್, ಹರ್ಷ ಜೈನ್ , ಭಾರ್ಗವಿ ಭಟ್ , ಲಿಖಿತ್ , ಗಂಭೀರ್ , ರಾಶಿಕಾ , ಮೌಲ್ಯ , ಗಾನವಿ, ಸಂತೋಷ್ , ನಿಕ್ಷಿತ್, ಶಾಶ್ವಿತ್, ಶ್ರೇಯಾ ಹಾಗೂ ಶ್ರಮ ಅವರು ಅಭಿಯಾನದಲ್ಲಿ ಪಾಲ್ಗೊಂಡು ಡೆಂಗ್ಯೂ ಜ್ವರದ ಲಕ್ಷಣಗಳು , ತಡೆಗಟ್ಟುವ ವಿಧಾನ ಹಾಗೂ ಪರಿಹಾರೋಪಾಯಗಳನ್ನು ತಿಳಿಸಿದರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಮಾರ್ಗದರ್ಶನ ನೀಡಿದರು.

Leave a Comment

error: Content is protected !!