ಪಟ್ರಮೆ: ಸೂರ್ಯತ್ತಾವು ನಿವಾಸಿ, ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

Suddi Udaya

ಪಟ್ರಮೆ: ಇಲ್ಲಿಯ ಸೂರ್ಯತ್ತಾವು ನಿವಾಸಿ ನಾರಾಯಣ ಉಂಗ್ರುಪುಳಿತ್ತಾಯ (81 ವರ್ಷ)ರವರು ಜು.13ರಂದು ನಿಧನರಾದರು.

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 30 ವರ್ಷಗಳ ಹಿಂದೆ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿ ಇದೀಗ ಕಳೆದ ಮೂರು ವರ್ಷಗಳಿಂದ ಸೂರ್ಯತ್ತಾವು ಎಂಬಲ್ಲಿ ಮನೆಮಾಡಿಕೊಂಡು ಒಬ್ಬರೇ ವಾಸ್ತವ್ಯವಿದ್ದರು.

ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾಡಿದ್ದಾಗ ಅವರ ಮಕ್ಕಳು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಅವರು ನಾಟಿವೈದ್ಯರೂ ಆಗಿದ್ದರು.

ಮೃತರು ಮಗ ಜಯಪ್ರಕಾಶ್ ಮಗಳು ವೀಣಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Comment

error: Content is protected !!