ಮಾನವ ಬಂಧುತ್ವ ವೇದಿಕೆ ಕರ್ನಾಟಕ ದಾವಣಗೆರೆ ಹರಿಹರದ ಮೈತ್ರಿವನದಲ್ಲಿ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ

Suddi Udaya

ಮಾನವ ಬಂಧುತ್ವ ವೇದಿಕೆ(ರಿ) ಕರ್ನಾಟಕ ಇದರ ತಾಲೂಕು ಸಂಚಾಲಕರುಗಳ ರಾಜ್ಯಮಟ್ಟದ ತರಭೇತಿ ಕಾರ್ಯಾಗಾರವು ದಾವಣಗೆರೆ ಹರಿಹರದ ಮೈತ್ರಿವನದಲ್ಲಿ ದಿನಾಂಕ ಜು.9 ಹಾಗೂ 10ರಂದು ಜರುಗಿತು.

ಸಾಮಾಜಿಕ ವ್ಯವಸ್ಥೆಯಲ್ಲಿನ ಮೌಢ್ಯ ಹಾಗೂ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ,ಸಾಂವಿಧಾನಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯಾಚರಿಸುತ್ತಿರುವ ಮಾನವ ಬಂಧುತ್ವ ವೇದಿಕೆಯ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಂಚಾಲಕರು ಭಾಗಿಯಾಗಿದ್ದರು.

ತರಬೇತುದಾರರಾಗಿ ರಾಜ್ಯ ಸಂಚಾಲಕರು,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರೊ.ಎಬಿ ರಾಮಚಂದ್ರಪ್ಪ,ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಮಾಹಿತಿ,ತರಭೇತಿ ನೀಡಿದರುಬೆಳ್ತಂಗಡಿ ತಾಲೂಕು ಘಟಕದಿಂದ ಟೀಂ ಅಭಯಹಸ್ತ ಸಂಘಟನೆಯ ಸ್ಥಾಪಕ ಸಂಚಾಲಕರು,ಪ್ರಗತಿಪರ ಚಿಂತಕರಾದ ಸಂದೀಪ್ ಎಸ್ ನೀರಲ್ಕೆ ಭಾಗಿಯಾದರು.

Leave a Comment

error: Content is protected !!