ತೆಂಕಕಾರಂದೂರು: ಕಟ್ಟೆಯ ಸಾರ್ವಜನಿಕ ಬಸ್ಸು ತಂಗುದಾಣ ಕುಸಿತ

Suddi Udaya

ಬೆಳ್ತಂಗಡಿ: ಕಳೆದೊಂದು ವಾರದಿಂದ ತಾಲೂಕಿನಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಪ್ರಕೃತಿ ವಿಕೋಪಗಳು ನಡೆಯುತ್ತಿದೆ. ಇಗಾಗಲೇ ರೆಡ್ ಆಲರ್ಟ್ ಇರುವುದರಿಂದ ಶಾಲೆಗಳಿಗೆ ರಜೆ ಸಾರಲಾಗಿದೆ.

ಕಳೆದ ದಿನ ಸುರಿದ ಭಾರಿ ಗಾಳಿ ಮಳೆಗೆ ತೆಂಕಕಾರಂದೂರು ಗ್ರಾಮದ ಪೆರಾಲ್ದರಕಟ್ಟೆ ಸಾರ್ವಜನಿಕ ಬಸ್ಸ್ ತಂಗುದಾಣ ಕುಸಿತ ಖಂಡಿದೆ. ಈ ಸಂದರ್ಭದಲ್ಲಿ ಯಾರು ಪ್ರಯಾಣಿಕರು ಇಲ್ಲದಿರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

ವಿದ್ಯಾರ್ಥಿಗಳು, ಉದ್ಯೋಗಸ್ಥರು ಕೆಲಸಕ್ಕೆ ತೆರಲುವಾಗ ಈ ಬಸ್ಸ್ ತುಂಗುದಾಣದಲ್ಲಿ ವಾಹನಕ್ಕೆ ಕಾಯುತ್ತಿರುತ್ತಾರೆ. ಸಂಬಂಧಪಟ್ಟವರು ಕೂಡಲೆ ದುರಸ್ಥಿಗೊಳಿಸುವಂತೆ ಸಾರ್ಜನಿಕರು ಒತ್ತಾಯಿಸಿದ್ದಾರೆ.

Leave a Comment

error: Content is protected !!