22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರುಡ್ ಸೆಟ್ ಸಂಸ್ಥೆಯ ಹುಟ್ಟು ಹಬ್ಬ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ

ಉಜಿರೆ : ಹಸಿದವರಿಗೆ ಆಹಾರ ನೀಡಿದರೆ ಆ ಕ್ಷಣದ ಹಸಿವು ನಿಗಾಬಹುದು ಆದರೆ ತನ್ನ ಆಹಾರವನ್ನು ತಾನೇ ಸಂಪಾದನೆ ಮಾಡುವ ದಾರಿ ಮತ್ತು ಕೌಶಲ ನೀಡಿದರೆ ಅದು ಅವನ ಜೀವನಕ್ಕೆ ದಾರಿ ಆಗುತ್ತದೆ. ಎಂಬ ಮಾತಿನಂತೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನಮ್ಮನಾಡಿನ ಯುವಜನತೆಗೆ ಅವರ ಜೀವನಕ್ಕೆ ಬೇಕಾದ ಕೌಶಲ್ಯವನ್ನು ಕಲಿಸುವ ಈ ರುಡ್ ಸೆಟ್ ಸಂಸ್ಥೆಯನ್ನು ಆರಂಭಿಸಿ ಮಾರ್ಗದರ್ಶನ ನೀಡಿದರು. ಇದು ದೇಶ ಅಥವಾ ಜಗತ್ತು ಆಲೋಚಿಸುವ ಮೊದಲು ಯೋಚಿಸಿದ ದಾರ್ಶನಿಕರು ಡಾ. ಡಿ.ವೀರೇಂದ್ರ ಹೆಗ್ಗಡೆಯವರು. ಈ ಹಿನ್ನಲೆಯಲ್ಲಿ ನಾವು ನಮ್ಮ ಕೌಶಲ್ಯದ ಬಲವರ್ಧನೆ ಪ್ರತಿ ನಿತ್ಯ ಮಾಡುತ್ತ ಇರಬೇಕು. ಇವತ್ತು ನಮ್ಮ ಮುಂದೆ ಸಾಧನಾ ಇದೆ ಆದರೆ ಅದನ್ನು ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು, ನಾವು ಬದಲಾವಣೆಗೆ ಸರಿಯಾಗಿ ನಮ್ಮ ಕೌಶಲ್ಯ ಅನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಇದಕ್ಕೆ ಬೇಕಾದ ಅವಕಾಶಗಳು ಇದೆ. ನಮ್ಮ ದೇಶದಲ್ಲಿ ಅತೀ ಯುವಜನರು ಇದ್ದಾರೆ ಅಂದರೆ ದುಡಿಯುವ ವಯಸ್ಸಿನವರು ಇದ್ದಾರೆ ಅದರೆ ಅವರಲ್ಲಿ ಕೌಶಲ್ಯ ಕಡಿಮೆ ಇದೆ ಅದನ್ನು ನಾವು ಬೆಳಸಿಕೊಳ್ಳಬೇಕು. ಇದರ ಕೆಲಸವನ್ನು ರುಡ್ ಸೆಟ್ ಸಂಸ್ಥೆ ಅತೀ ಅಮೂಲ್ಯವಾದ ಕೌಶಲ್ಯ ನೀಡುತ್ತದೆ. ಇಲ್ಲಿ ಎರಡು ಅಥವಾ ಮೂರು ವರ್ಷ ಗಳಲ್ಲಿ ನೀಡುವ ಕೌಶಲ್ಯ ವನ್ನು ರುಡ್ ಸೆಟ್ ಸಂಸ್ಥೆ ಕನಿಷ್ಠ 6 ರಿಂದ 45ದಿವಸಗಳಲ್ಲಿ ಯುವಜನರಿಗೆ ಕಲಿಸುತ್ತದೆ. ಜೊತೆಗೆ ಕಾಲಕ್ಕೆ ಕಾಲಕ್ಕೆ ಸರಿಯಾಗಿ ಕೌಶಲ್ಯವನ್ನು ಬೆಳಸಿ, ತನ್ನಳೊಗಿನ ಇಚ್ಛೆ ಉತ್ಕಟವಾಗಿ ಇರಬೇಕು ಇದು ಅಭಿವೃದ್ಧಿಗೆ ದಾರಿಯಾಗುತ್ತದೆ. ಎಂದು ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿಕಟಪೂರ್ವ ಪ್ರಾಶುಂಪಾಲರಾದ ಡಾ.ಜಯಕುಮಾರ್ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.

ಅವರು ಇಂದು2014ರಲ್ಲಿ ವಿಶ್ವ ಸಂಸ್ಥೆಯವರು ಫೋಷಿಸಿದಂತೆ ಜುಲೈ 15 ವಿಶ್ವ ಯುವ ಕೌಶಲ್ಯ ದಿನವನ್ನಾಗಿ ಆಚರಿಸಲಾಯಿತು. ಇದರ ಜೊತೆಗೆ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗದೊಂದಿಗೆ 1982 ಜುಲೈ 15ರಂದು ರುಡ್ ಸೆಟ್ ಸಂಸ್ಥೆ ಯನ್ನು ಆರಂಭಿಸಿದ ದಿನ ಸಹ ಆಗಿರುತ್ತದೆ. ಇದು ರುಡ್ ಸೆಟ್ ಸಂಸ್ಥೆ, ಉಜಿರೆ 42ನೇ ಹುಟ್ಟು ಹಬ್ಬ ಸಹ ಆಚರಿಸಲಾಯಿತು. ಇದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೌಶಲ್ಯ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಗೆ ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆಯ ಪುಸ್ತಕ ವಿತರಿಸಿ, ಸಾಮಾಜಿಕ ವಿಮೆಗಳು ಹಾಗೂ ಪಿಂಚಣಿ ಯೋಜನೆ ಬಗ್ಗೆ ಹಾಗೂ ಅದರ ಮಹತ್ವವನ್ನು ಉಜಿರೆ ಕೆನರಾ ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಜಯಂತ ಅಡಿಗ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ವಹಿಸಿದ್ದರು.

ರುಡ್ ಸೆಟ್ ಸಂಸ್ಥೆಯ ಕೇಂದ್ರ ಕಛೇರಿಯ ಹಿರಿಯ ಉಪನ್ಯಾಸಕಿ ಶ್ರೀಮತಿ ಅನುಸೂಯ ರೈ, ಉಪನ್ಯಾಸಕ ಲೋಹಿತ್ ಜೈನ್ ಉಪಸ್ಥಿತರಿದ್ದರು.

ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.

Related posts

ನಾರಾವಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಔಷಧಿ ವನ ಕಾರ್ಯಕ್ರಮ

Suddi Udaya

ಯಕ್ಷ ಭಾರತಿ ಕನ್ಯಾಡಿ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಭಗವದ್ಗೀತಾ ಸ್ಪರ್ಧೆ : ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಹಂಸಿನಿ ಭಿಡೆಗೆ ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ

Suddi Udaya

ಲಯನ್ ಎಂ. ಜಿ. ಶೆಟ್ಟಿಯವರಿಗೆ ಪ್ರತಿಷ್ಠಿತ ಎಮ್.ಜೆ.ಎಫ್ ಗೌರವ

Suddi Udaya

ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 11ನೇ ಸಹಾಯಧನ ಹಸ್ತಾಂತರ

Suddi Udaya

ಆರಂಬೋಡಿ ಗ್ರಾಮದ 8 ಶಾಲೆಗಳ ವಿದ್ಯಾರ್ಥಿಗಳಿಗೆ ಮನೋಜ್- ಧನ್ಯಶ್ರೀ ದಂಪತಿಯಿಂದ ಪುಸ್ತಕ ವಿತರಣೆ

Suddi Udaya
error: Content is protected !!