ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ಕುತ್ಲೂರು:- ಮುಂಗಾರು ಮಳೆ ಎಡಬಿಡದೇ ಬರುತ್ತಿದ್ದು, ಹೊಳೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಎಲ್ಲಿಂದಲೋ ಹರಿವಿನಲ್ಲಿ ‌ಬಂದ ಬೃಹದಾಕಾರದ ಮರದ ದಿಮ್ಮಿ ಕುತ್ಲೂರು ಗ್ರಾಮದ ಹುದೆಂಬರ ಕಟ್ಟ ಎಂಬಲ್ಲಿ ಸೇತುವೆಗೆ ಅಡ್ಡಲಾಗಿ ಬಂದು ನಿಂತಿರುವುದನ್ನು ಮನಗಂಡ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಪೂಜಾರಿ ಮರ್ದೊಟ್ಟು ಮತ್ತು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಸದಾ ಹೆಸರಲ್ಲಿರುವ ಶಿವಶಕ್ತಿ ಫ್ರೆಂಡ್ ಕ್ಲಬ್ ನ ಸದಸ್ಯರು ಸೇರಿಕೊಂಡು ಮರದ ದಿಮ್ಮಿಯನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುವ ಮೂಲಕ ಕಾರ್ಯವೈಕರಿಗೆ ಪಾತ್ರರಾಗಿದ್ದಾರೆ

ಈ ಸಂದರ್ಭದಲ್ಲಿ ತುಂಗಪ್ಪ ಪೂಜಾರಿ ರಂಜಿತ್, ಪುನೀತ್, ಶಿವರಾಜ್, ಯೋಗೀಶ್ ಅಂಚನ್, ಧರ್ಮಪಾಲ್, ಸಚಿನ್‌, ಸತೀಶ್ ಬೊಲ್ಲೆಜಾಲು, ಪ್ರವೀಣ್ ಅಲಂಬ ಸಹಕರಿಸಿದರು.

Leave a Comment

error: Content is protected !!