July 23, 2026
Uncategorized

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಡ ಕುಟುಂಬದ ಮನೆಯ ದುರಸ್ಥಿ ಕಾರ್ಯ

ಬೆಳ್ತಂಗಡಿ : ಲಾಯಿಲ ಕಾರ್ಯಕ್ಷೇತ್ರದಲ್ಲಿ ವಾಸವಾಗಿರುವ ಬಡ ಕುಟುಂಬದ ಮಹಿಳೆ ಶ್ರೀಮತಿ ವಿನೋದ ಚಂದು ರಾಣ್ಯ ರವರ ಮನೆಯು ವಿಪರೀತ ಗಾಳಿ ಮಳೆಯಿಂದ ಮನೆಯ ಮೇಲ್ಛಾವಣಿಯ ಹಂಚುಗಳು ಒಡೆದು ಹೋಗಿದ್ದು ವಿಪರೀತ ಮನೆಯು ಸೋರುತ್ತಿದ್ದು ಇವರಿಗೆ ವಾಸ್ತವ್ಯಕ್ಕೆ ಬಹಳ ಕಷ್ಟಕರವಾಗಿತ್ತು.
ಇದನ್ನು ಗಮನಿಸಿದ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಹರಿಕೃಷ್ಣ ರವರು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು ಪಂಚಾಯತ್ ವತಿಯಿಂದ ಟಾರ್ಪಲ್ ನ್ನು ಒದಗಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ ಸುಶಾಂತ್ ರವರಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಟಾರ್ಪಲ್ ನ್ನು ಹಾಕಿ ದುರಸ್ಥಿ ಮಾಡಿಕೊಡುವ ಸಹಕಾರವನ್ನು ಮನವಿ ಮಾಡಿಕೊಂಡರು.

ಈ ಬಗ್ಗೆ ಮೇಲ್ವಿಚಾರಕರು ಶೌರ್ಯ ಘಟಕದ ಸಂಯೋಜಕರಾದ ವಸಂತಿ ರವರಿಗೆ ತಿಳಿಸಿದಾಗ ತಕ್ಷಣ ಸಂಯೋಜಕರು ಸ್ವಯಂ ಸೇವಕರನ್ನು ಈ ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದರು. ಕೂಡಲೇ ಘಟಕ ಪ್ರತಿನಿಧಿ ಮಂಜುನಾಥ್, ಒಲ್ವಿನ್ ಡಿಸೋಜ, ಅರ್ವಿನ್ ಮಿರಾಂದ, ವಸಂತ್ ರವರು ಸ್ಥಳಕ್ಕೆ ಧಾವಿಸಿ ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಮನೆಯ ದುರಸ್ಥಿ ಕಾರ್ಯಾಚರಣೆ ನಡೆಸಿ ಬಡ ಮಹಿಳೆಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟರು.

Related posts

ಸುಳ್ಯೋಡಿ: ಮಾತೃಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಗಡಾಯಿಕಲ್ಲು ಚಾರಣ: ತಾತ್ಕಾಲಿಕ ನಿಷೇಧ

Suddi Udaya

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಆ.16: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಾವತಿ, ಉಪಾಧ್ಯಕ್ಷರಾಗಿ ಸಾವಿತ್ರಿ ಆಯ್ಕೆ

Suddi Udaya

ಇಂದಬೆಟ್ಟು: ಬಂಗಾಡಿ ನಿವಾಸಿ ಜ್ವರದಿಂದ ಬಳಲಿ ಅವಿವಾಹಿತ ವಿಶ್ವನಾಥ ನಿಧನ

Suddi Udaya
error: Content is protected !!