September 6, 2026
Uncategorized

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಡ ಕುಟುಂಬದ ಮನೆಯ ದುರಸ್ಥಿ ಕಾರ್ಯ

ಬೆಳ್ತಂಗಡಿ : ಲಾಯಿಲ ಕಾರ್ಯಕ್ಷೇತ್ರದಲ್ಲಿ ವಾಸವಾಗಿರುವ ಬಡ ಕುಟುಂಬದ ಮಹಿಳೆ ಶ್ರೀಮತಿ ವಿನೋದ ಚಂದು ರಾಣ್ಯ ರವರ ಮನೆಯು ವಿಪರೀತ ಗಾಳಿ ಮಳೆಯಿಂದ ಮನೆಯ ಮೇಲ್ಛಾವಣಿಯ ಹಂಚುಗಳು ಒಡೆದು ಹೋಗಿದ್ದು ವಿಪರೀತ ಮನೆಯು ಸೋರುತ್ತಿದ್ದು ಇವರಿಗೆ ವಾಸ್ತವ್ಯಕ್ಕೆ ಬಹಳ ಕಷ್ಟಕರವಾಗಿತ್ತು.
ಇದನ್ನು ಗಮನಿಸಿದ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಹರಿಕೃಷ್ಣ ರವರು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು ಪಂಚಾಯತ್ ವತಿಯಿಂದ ಟಾರ್ಪಲ್ ನ್ನು ಒದಗಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ ಸುಶಾಂತ್ ರವರಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಟಾರ್ಪಲ್ ನ್ನು ಹಾಕಿ ದುರಸ್ಥಿ ಮಾಡಿಕೊಡುವ ಸಹಕಾರವನ್ನು ಮನವಿ ಮಾಡಿಕೊಂಡರು.

ಈ ಬಗ್ಗೆ ಮೇಲ್ವಿಚಾರಕರು ಶೌರ್ಯ ಘಟಕದ ಸಂಯೋಜಕರಾದ ವಸಂತಿ ರವರಿಗೆ ತಿಳಿಸಿದಾಗ ತಕ್ಷಣ ಸಂಯೋಜಕರು ಸ್ವಯಂ ಸೇವಕರನ್ನು ಈ ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದರು. ಕೂಡಲೇ ಘಟಕ ಪ್ರತಿನಿಧಿ ಮಂಜುನಾಥ್, ಒಲ್ವಿನ್ ಡಿಸೋಜ, ಅರ್ವಿನ್ ಮಿರಾಂದ, ವಸಂತ್ ರವರು ಸ್ಥಳಕ್ಕೆ ಧಾವಿಸಿ ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಮನೆಯ ದುರಸ್ಥಿ ಕಾರ್ಯಾಚರಣೆ ನಡೆಸಿ ಬಡ ಮಹಿಳೆಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟರು.

Related posts

ಕನ್ಯಾಡಿ ಗುತ್ತು ಮನೆಯ ಅಚ್ಚುತರಾವ್ ಮತ್ತಿಲ ನಿಧನ

Suddi Udaya

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಭೇಟಿ

Suddi Udaya

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya

ಬರೆಂಗಾಯ ಭೂತಳಗುಡ್ಡೆ ನಿವಾಸಿ ರವೀಂದ್ರ ರಾವ್ ನಿಧನ

Suddi Udaya

ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮೋಸ : ಮತ್ತೊಮ್ಮೆ ಕರ್ನಾಟಕಕ್ಕೆ ಮಲತಾಯಿ ಧೋರಣೆ: ರಕ್ಷಿತ್ ಶಿವರಾಂ

Suddi Udaya

ವಾಣಿ ಪದವಿ ಪೂರ್ವ ಕಾಲೇಜ್ ತಂಡಗಳು ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!