ಬಂಗೇರಕಟ್ಟೆಯಿಂದ ಮಡಂತ್ಯಾರಿನವರೆಗೆ ರಸ್ತೆಯಲ್ಲೆ ಹರಿಯುತ್ತಿರುವ ಮಳೆ ನೀರು: ತಕ್ಷಣ ಕ್ರಮ ಕೈಗೊಳ್ಳುವಂತೆ ಚಾಲಕರ ಹಾಗೂ ಸಾರ್ವಜನಿಕರ ಆಗ್ರಹ

Suddi Udaya

ಮಡಂತ್ಯಾರು: ಬಂಗೇರಕಟ್ಟೆಯಿಂದ ಮಡಂತ್ಯಾರಿನವರೆಗೆ ರಸ್ತೆಯ ಬದಿಯ ಸರಿಯಾದ ಚರಂಡಿಗಳು ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಸಾರ್ವಜನಿಕರಿಗೂ ಶಾಲಾ ಮಕ್ಕಳಿಗೂ ನಡೆದುಕೊಂಡು ಹೋದಾಗ ಕೆಸರಿನ ಅಭಿಷೇಕವಾಗುತ್ತಿದೆ.

ಮಾರಿಗುಡಿ ಸಮೀಪ ಇತ್ತೀಚಿಗೆ ಆಟೋ ಚಾಲಕ ಮಾಲಕರ ಸಂಘ ಅಧ್ಯಕ್ಷರು ಶ್ರಮದಾನದಲ್ಲಿ ಚಿಕ್ಕ ಚಿಕ್ಕ ಚರಂಡಿಗಳನ್ನು ಸರಿಪಡಿಸಿದರು ಆದರೂ ದೊಡ್ಡ ಚರಂಡಿಗಳ ಅವಶ್ಯಕತೆ ಇರುವುದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಚಾಲಕರ ಹಾಗೂ ಸಾರ್ವಜನಿಕರ ಆಗ್ರಹಿಸಿದರು.

Leave a Comment

error: Content is protected !!