April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

ಬೆಳ್ತಂಗಡಿ : ಈಗಾಗಲೇ ಭಾರೀ ಮಳೆಯಿಂದಾಗಿ ತಾಲೂಕಿನ ಎಮ್.ಡಿ.ಆರ್ , ‍ಎಸ್.ಹೆಚ್ ಹಾಗೂ ಇನ್ನಿತರ ಮಾರ್ಗಗಳು ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ಓಡಾಡಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ನಿರ್ವಹಣೆ (maintenance work) ಇಲಾಖೆಯಿಂದ ಪ್ರಹಸನ ಪ್ರಾರಂಭವಾಗಿದೆ. ಇಲಾಖೆಗೆ ಬೇಕಾದ ಗುತ್ತಿಗೆದಾರರನ್ನು ಕರೆದು ಮುಂಗಡ (ಅಡ್ವಾನ್ಸ್ )ಆಗಿ ಚರಂಡಿ ದುರಸ್ತಿ, ಜಂಗಲ್ ಕಟ್ಟಿಂಗ್, ಹೊಂಡ ಮುಚ್ಚುವ ಕಾಮಗಾರಿಗಳನ್ನು ಯಾವುದೇ ಕರಾರು ಇಲ್ಲದೆ ಕ್ರಿಯಾಯೋಜನೆ ಇಲ್ಲದೆ ಅನುದಾನ ಇಲ್ಲದೆ ಪಿಡಬ್ಲ್ಯೂಡಿ ಯಲ್ಲಿ ಮಾಡಿಸುತ್ತಾರೆ. ಮುಂದೆ ಕ್ರಿಯಾಯೋಜನೆ ಅನುಮೋದನೆ (approval ) ಆಗಿ ಟೆಂಡರ್ ಆಗುತ್ತದೆ. ಟೆಂಡರ್ ನಲ್ಲಿ ಯಾವುದೇ ಗುತ್ತಿಗೆದಾರರು ಭಾಗವಹಿಸಬಹುದು. ಆವಾಗ ಮುಂಗಡ

(advance)ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಚೊಂಬೇ ಗತಿ. ಆದುದರಿಂದ ಮುಂಗಡ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರು ಆಲೋಚಿಸಿ. ಸರಕಾರದ ಪಾವತಿಯ ಬಗ್ಗೆ ಈಗಾಗಲೇ ಗುತ್ತಿಗೆದಾರರು ಪಡುವ ಬವಣೆಯನ್ನು ಯಾವುದೇ ಚುನಾಯಿತ ಪ್ರತಿನಿಧಿಯಾಗಲಿ ಇಲಾಖಾಧಿಕಾರಿಗಳಿಗಾಗಲಿ ಪರಿಜ್ಞಾನ ಇರುವುದಿಲ್ಲ. ಆದುದರಿಂದ ಗುತ್ತಿಗೆದಾರರೇ ಎಚ್ಚರ ಎಚ್ಚರ….
ನಮ್ಮನ್ನು ಕೇಳುವವರು ಯಾರೂ ಇಲ್ಲ. ಕಳೆದ ಹಲವಾರು ವರ್ಷಗಳಿಂದ ಮುಂಗಡ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ದೇವರೇ ಗತಿ….

  • ನೊಂದ ಗುತ್ತಿಗೆದಾರರು. ಎಂಬ ಪೋಸ್ಟ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

Related posts

ಡಿ.17: ಬೆಳ್ತಂಗಡಿ ತಾಲೂಕು18 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮರೋಡಿ: ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀರಾಮ ನಾಮ ಸಪ್ತಾಹದ ಉದ್ಘಾಟನೆ:

Suddi Udaya

ಆಡಳಿತ ಪಕ್ಷ ರಾಜ್ಯಪಾಲರಿಂದ ಮಾಡಿಸಿರುವ ಭಾಷಣ ಕೇವಲ ಸಾಹಿತ್ಯಿಕವಾಗಿ ರಂಜನೀಯವಾಗಿತ್ತೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲದೆ ನೀರಸವಾಗಿತ್ತು: ಎಂ.ಎಲ್‌.ಸಿ ಪ್ರತಾಪಸಿಂಹ ನಾಯಕ್

Suddi Udaya

ಜೈನ ಮುನಿ ಆಚಾರ್ಯ ಶ್ರೀ ಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ : ಶಾಸಕ ಹರೀಶ್ ಪೂಂಜ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya
error: Content is protected !!