23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಸಮಸ್ಯೆ

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಅಡ್ಡಲಾಗಿ ನಿಂತ ಖಾಸಗಿ ವರುಣ್ ಬಸ್ ನ ಸಿಬ್ಬಂದಿಗೆ ತರಾಟೆ ತೆಗೆದುಕೊಂಡ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣಿಕರು

ಬೆಳ್ತಂಗಡಿ: ಪುತ್ತೂರು-ಧರ್ಮಸ್ಥಳ ಮಾರ್ಗವಾಗಿ ಬೆಳಿಗ್ಗೆ ಮತ್ತು ಸಂಜೆ ನಿಯಮಿತ ಸಮಯದಲ್ಲಿ ಹೊರಡುವ ಬಸ್ ಗೆ ಜು.25 ರಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಐದು ನಿಮಿಷಗಳ ಕಾಲ ಮುಂಚಿತವಾಗಿ ಬಂದಿದೆ ಅನ್ನುವ ಕಾರಣಕ್ಕೆ ಉಪ್ಪಿನಂಗಡಿ-ಬೆಳ್ತಂಗಡಿಗೆ ಹೊರಡುವ ಖಾಸಗಿ ಒಡೆತನದ ವರುಣ್ ಬಸ್ ಕೆ.ಎಸ್‌‌‌.ಆರ್.ಟಿ.ಸಿ ಬಸ್ ಗೆ ಅಡ್ಡಲಾಗಿ ನಿಂತ ಕಾರಣಕ್ಕಾಗಿ ದಿನನಿತ್ಯ ಪ್ರಯಾಣಿಸುವ ಸರಕಾರಿ ಬಸ್ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಅಸಂಬದ್ಧ ಪದ ಬಳಕೆ ಮಾಡಿರುವ ಬಗ್ಗೆ ವರುಣ್ ಬಸ್ ಕಂಡೆಕ್ಟರ್ ಹಾಗೂ ಏಜೆಂಟ್ ಗಳಿಗೆ ಸರಿಯಾದ ಉತ್ತರ ನೀಡಿರುವ ಬಗ್ಗೆ ಜುಲೈ 25 ರಂದು ವರದಿಯಾಗಿದೆ.

ಎಂದಿನಂತೆ ಪುತ್ತೂರು ಬಸ್ ನಿಲ್ದಾಣದಿಂದ 5.30 ಕ್ಕೆ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ 6.05 ನಿಮಿಷಕ್ಕೆ ತಲುಪಿತ್ತು, ಅದನ್ನೇ ಖ್ಯಾತೆ ತೆಗೆದು ಆ ಸಮಯದಲ್ಲಿ ಹೊರಡುವ ವರುಣ್ ಬಸ್ ಸಮಯಕ್ಕೆ ಮುಂಚಿತವಾಗಿ ಬಂದಿರುವುದರ ಕಾರಣವಾಗಿ ಸರಕಾರಿ ಬಸ್ ಗೆ ಅಡ್ಡಲಾಗಿ ನಿಂತು, ಮುಂದೆ ಚಲಾಯಿಸದಂತೆ ಇಲ್ಲ ಸಲ್ಲದ ಬೈಗುಳ ಮಾತನಾಡಿರುವುದನ್ನು ಕೇಳಿದ ಪ್ರಯಾಣಿಕರು ಅಡ್ಡಲಾಗಿರುವ ಬಸ್ ನ್ನು ತೆಗೆಯುವಂತೆ ಮನವಿ ಮಾಡಿದ್ದರು, ಅದಕ್ಕೂ ಜಗ್ಗದ ವರುಣ್ ಬಸ್ ‌ಕಂಡೆಕ್ಟರ್ ಮತ್ತು ಏಜೆಂಟ್ ಗಳು ಏಕಾಏಕಿ ಅಸಂಬದ್ಧ ಮಾತುಗಳ್ನಾಡಿರುವ ಬಗ್ಗೆ ಬಸ್ ಪ್ರಯಾಣಿಕರು ತಾವು ಹಿರಿಯರು ಈ ರೀತಿ ಮಾತನಾಡುವುದು ಸರಿಯಲ್ಲ, ನಿಮ್ಮ ಮಾತು ಇನ್ನೊಬ್ಬರಿಗೆ ಮಾರ್ಗದರ್ಶನವಾಗಬೇಕು ಎನ್ನುವ ಮಾತುಗಳನ್ನಾಡಿದ್ದಾರೆ.

ಪ್ರತಿನಿತ್ಯ ಧರ್ಮಸ್ಥಳ-ಪುತ್ತೂರು ಮಾರ್ಗವಾಗಿ ಸರಿಯಾದ ಸರಕಾರಿ ಬಸ್ ಓಡಾಡದಂತೆ ಖಾಸಗಿಯಾಗಿ ಓಡಾಡುವ ಬೆಳ್ತಂಗಡಿ-ಉಪ್ಪಿನಂಗಡಿ ಬಸ್ ನವರೇ ಸಮಸ್ಯೆ ಮಾಡಿರಬಹುದು ಎಂದು ಜನ ಅಂದುಕೊಳ್ಳುತ್ತಿದ್ದಾರೆ.

Related posts

ಗೇರುಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ರಚನೆ

Suddi Udaya

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಬೆಳ್ತಂಗಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಹಾಗೂ ಮಹಿಳಾ ಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ : ಪರಮ ಪೂಜ್ಯ ಶ್ರೀ ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವ

Suddi Udaya

ಉಜಿರೆ: ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ಹಾಸನ ಬಿಜಿಎಸ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಭೇಟಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಜನ ಸಹಭಾಗಿತ್ವದಲ್ಲಿ 8ನೇ ವರ್ಷದ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16529 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

Suddi Udaya

ಆರಂಬೋಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಬಿರ್ವೆರ್ ಕುಡ್ಲದ ಸ್ಥಾಪಕ ,ಯುವ ನಾಯಕ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಮತಪ್ರಚಾರ

Suddi Udaya

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪಬ್ಲೀಕ್ ಪರೀಕ್ಷೆ ಯಶಸ್ವಿ ಆರಂಭ: ಪರೀಕ್ಷೆ ಬರೆಯುತ್ತಿದ್ದಾರೆ 70 ಪ್ರೌಢಗಳ 4215 ವಿದ್ಯಾರ್ಥಿಗಳು

Suddi Udaya
error: Content is protected !!