ನಿಡ್ಲೆ ವ್ಯಾಪ್ತಿಯ ಬರೆಂಗಾಯ ಸಮೀಪ ಮುಳಂಪಾಯ ಎಂಬಲ್ಲಿ ಏರ್ಟೆಲ್ ಕಂಪೆನಿಯ ಮೊಬೈಲ್ ಟವರ್ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ.
ಇತ್ತೀಚೆಗೆ ಏರ್ಟೆಲ್ ಕಂಪೆನಿಯ ಮೊಬೈಲ್ ಟವರ್ ನಿರ್ಮಾಣವಾದರು ಎಲ್ಲರೂ ಏರ್ಟೆಲ್ ಸಿಮ್ ಖರೀದಿಸಿದರು. ಸ್ವಲ್ಪ ಸಮಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈ ಟವರ್ ನಿರ್ಮಾಣಕ್ಕೆ ಮೊದಲು ನಿಡ್ಲೆಯ ಏರ್ಟೆಲ್ ಟವರ್, ಮತ್ತು ಕಾರ್ಯತ್ತಡ್ಕ ಏರ್ಟೆಲ್ ಟವರ್ನಿಂದ ನೆಟ್ವರ್ಕ್ ಸಿಗುತ್ತಿತ್ತು. ಇತ್ತೀಚೆಗೆ ದಿನಗಳಿಂದ ಸರಿಯಾಗಿ ನೆಟ್ ವರ್ಕ್ ಸಿಗುತ್ತಿಲ್ಲ. ಕರೆಂಟ್ ಹೋದರಂತೂ ಇಲ್ಲವೇ ಇಲ್ಲ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗುತ್ತಿದ್ದು ನೆಟ್ ವರ್ಕ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರಿಂದ ಸಂಬಂಧಪಟ್ಟವರು ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸುವಂತೆ ಕೃಷ್ಣ ಕುಮಾರ್ ಕಾಟ್ಲ ರವರು ಒತ್ತಾಯಿಸಿದ್ದಾರೆ.











