30.9 C
ಪುತ್ತೂರು, ಬೆಳ್ತಂಗಡಿ
April 5, 2025
ಸಂಘ-ಸಂಸ್ಥೆಗಳು

ಮಹಿಳಾ ವೃಂದ ಬೆಳ್ತಂಗಡಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಡೆಂಗ್ಯೂ ಜ್ವರದ ಮಾಹಿತಿ ಮತ್ತು ಜಾಗೃತಿ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಬೆಳ್ತಂಗಡಿ:ಮಹಿಳಾ ವೃಂದ ಬೆಳ್ತಂಗಡಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಡೆಂಗ್ಯೂ ಜ್ವರದ ಮಾಹಿತಿ ಮತ್ತು ಜಾಗೃತಿ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆಯು ಸರಕಾರಿ ಪ್ರೌಢ ಶಾಲೆ ಬೆಳ್ತಂಗಡಿಯಲ್ಲಿ ಜುಲೈ 26 ರಂದು ನಡೆಯುತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರಾ ಅಶೋಕ್ ವಹಿಸಿದ್ದರು.

ಬೆಳ್ತಂಗಡಿ ಸಾರ್ವಜನಿಕ ಆರೋಗ್ಯ ಇಲಾಖೆಯ ಶ್ರೂಶ್ರಕ ಸುಂದರ್ ಮತ್ತು ಅಮ್ಮಿ ಸಿಸ್ಟರ್ ಡೆಂಗ್ಯೂ ಜ್ವರದ ಗುಣಲಕ್ಷಣಗಳು ಹಾಗೂ ತಡೆಗಟ್ಟುವ ಬಗ್ಗೆ ಜಾಗೃತಿ ವಿಧಾನ ಮತ್ತು ಮಾಹಿತಿ ನೀಡಿದರು.

ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿಯನ್ನು ಮೇಜರ್ ಜನರಲ್ ಎಂ.ವಿ.ಭಟ್ ರವರು ನೀಡಿದರು.

ಮಹಿಳಾ ವೃಂದದ ವತಿಯಿಂದ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ವೃಂದದ ಸದಸ್ಯರಾದ ವೀಣಾ ವಿ ಕುಮಾರ್,
ರಜಿನಿ,ಉಮಾ ರಾವ್, ರಶ್ಮಿ ಪಟವರ್ಧನ್,ಜೆಸಿರೆಟ್ ಕೋ ಆರ್ಡಿನೇಟರ್ ಶೃತಿ ರಂಜಿತ್ ಉಪಸ್ಥಿತರಿದ್ದರು.

ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ.ನಿರೂಪಿಸಿದರು.
ಪ್ರೀತಿ ಆರ್ ರಾವ್ ವಂದಿಸಿದರು.

Related posts

ನಲಿಕೆಯವರ ಸಮಾಜ ಸೇವಾ ಸಂಘ ರಿ. ಬೆಳ್ತಂಗಡಿ ನೂತನ ಅಧ್ಯಕ್ಷರಾಗಿ ಗೋಪಾಲ ಕಾಶಿಪಟ್ಣ, ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಾಪು

Suddi Udaya

ಕೊಕ್ಕಡದ ಶಾಂತಪ್ಪ ಮಡಿವಾಳರವರ ನೇತೃತ್ವದಲ್ಲಿ 45 ಭಕ್ತರು ತಿರುವನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಭೇಟಿ

Suddi Udaya

ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ. ಇದರ ಆಶ್ರಯದಲ್ಲಿ ನಡೆಯುವ 20 ನೇ ವರುಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಬಿಡುಗಡೆ

Suddi Udaya

ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಅಧ್ಯಕ್ಷರಾಗಿ ದಯಾನಂದ ನಾಯಕ್ ಪುಂಜಾಲಕಟ್ಟೆ -,ಕಾಯ೯ದಶಿ೯ಯಾಗಿ ಸುಧಾಕರ್ ಪ್ರಭು

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: 12 ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಪುತ್ರಬೈಲು ಶ್ರೀಶಕ್ತಿಪೀಠ ಕೊರಗಜ್ಜ ಕಬಡ್ಡಿ ತಂಡಕ್ಕೆ ದ್ವೀತಿಯ ಬಹುಮಾನ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ