ಮುಂಡಾಜೆ ಸೀಟು ಬಳಿ ಬೊಲೇರೋ ಬೈಕ್ ಗೆ ಡಿಕ್ಕಿ : ಶಾಲಾ ಬಾಲಕಿ ಆಸ್ಪತ್ರೆಯಲ್ಲಿ ಮೃತ್ಯು

Suddi Udaya

ಬೆಳ್ತಂಗಡಿ: ಮುಂಡಾಜೆ ಸೀಟು ಬಳಿ ಬೊಲೇರೋ ಬೈಕ್ ಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕಿನಲ್ಲಿದ್ದ ಬಾಲಕಿ ಗಂಭೀರ ಗಾಯಗೊಂಡು ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮೃತ ಪಟ್ಟ ಘಟನೆ ನಡೆದಿದೆ.

ಕಲ್ಮಂಜದ ಗುರುಪ್ರಸಾದ್ ಗೋಖಲೆ ಅವರ ಪುತ್ರಿ ಅನರ್ಘ್ಯ(9ವಷ೯) ಮೃತ ಪಟ್ಟ ಬಾಲಕಿ. ಈಕೆ
ಉಜಿರೆ ಎಸ್‌ಡಿಎಂ ಶಾಲೆಯ 4ನೇ ವಿದ್ಯಾರ್ಥಿನಿಯಾಗಿದ್ದಾರೆ.

ಗುರುಪ್ರಸಾದ್ ಉಜಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ವಿದ್ಧು, ಇಂದು ಮಧ್ಯಾಹ್ನ ನಂತರ ಶಾಲೆಗೆ ರಜೆ ಇರುವುದರಿಂದ ಅವರ ಮೂಲ ಮನೆ ಮುಂಡಾಜೆ ಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ಬೊಲೇರೋ ಪರಾರಿಯಾಗಿದ್ದು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Comment

error: Content is protected !!