September 6, 2026
ಸಂಘ-ಸಂಸ್ಥೆಗಳು

ಕರ್ನಾಟಕ ಸೀರೋ‌‌ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆ‌ಎಸ್‌ಎಮ್‌ಸಿಎ) ವತಿಯಿಂದ ಕಾರ್ಗಿಲ್ ವಿಜಯ ದಿವಸ ನಿವೃತ್ತ ಯೋಧರಿಗೆ ಸನ್ಮಾನ

ಬೆಳ್ತಂಗಡಿ; ಕರ್ನಾಟಕ ಸೀರೋ‌‌ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆ‌ಎಸ್‌ಎಮ್‌ಸಿಎ) ವತಿಯಿಂದ ಕಾರ್ಗಿಲ್ ವಿಜಯ ದಿವಸ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಉಜಿರೆ ಧರ್ಮಕ್ಷೇತ್ರದಲ್ಲಿ ನೆಲೆಸಿರುವ ರೊಯ್ ಅಂಬಿಕೋನತ್ ಮತ್ತು ಡೇವಿಸ್ ಕಣ್ಣುಕಡನ್ ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.
ಉಜಿರೆ ಸೈಂಟ್ ಜಾರ್ಜ್ ಚರ್ಚ್ ನ ಧರ್ಮಗುರು ಫಾ. ಬಿಜು ಮ್ಯಾಥ್ಯೂ ಅಂಬಟ್ ಅವರು ಯೋಧರನ್ಮು ಶಾಲು ಹೊದಿಸಿ ಸನ್ಮಾನಿಸಿದರು. ಉಜಿರೆ ಘಟಕ ಅಧ್ಯಕ್ಷ ಜೋಬಿ ಮುಳವನ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ರೊಯ್ ಅಂಬಿಕೋನತ್ ರವರು 1980ರಲ್ಲಿ ಸೇನೆಗೆ ಸೇರಿ ಮಿಸೋರಮ್,ಅಹ್ಮದಾಬಾದ್, ಸಿಕ್ಕಿಂ ಜೈಪುರ್, ಕಾಶ್ಮೀರ, ಶ್ರೀಲಂಕಾದ ಜಾಫ್ನ, ಬೆಂಗಳೂರು ಮುಂತಾದೆಡೆ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತಿ ಹೊಂದಿದರು.
ಶ್ರೀ ಡೇವಿಸ್ ಕಣ್ಣುಕಾಡನ್ ರವರು 1992 ರಲ್ಲಿ ಸೇನೆಗೆ ಸೇರಿ ಜಾವಲ್ಪುರ್, ಜಲಂಧರ್, ಮಧುರೈ, ದೆಹಲಿ, ಶ್ರೀನಗರ, ಗುಡ್ಗವ್, ಲಡಾಕ್, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇವರು 2008 ರಲ್ಲಿ ನಿವೃತ್ತಿ ಹೊಂದಿದರು.

ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ನಿರ್ದೇಶನದಂತೆ ಬೆಳ್ತಂಗಡಿ ಧರ್ಮಕೇಂದ್ರದ ಎಲ್ಲ ಚರ್ಚ್ ಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಟ್ಟಿಗೆ ಎಸ್ ಎಸ್ ಎಲ್ ಸಿ ಉನ್ನತ ಶ್ರಣಿಯಲ್ಲಿ ತೇರ್ಗಡೆ ಗೊಂಡ ಮಕ್ಕಳನ್ನೂ ಗೌರವಿಸಲಾಯಿತು. ದಿವ್ಯ ಬಲಿಪೂಜೆ ಮತ್ತು ಸಂತ ಅಲ್ಫೋನ್ಸ್ ರವರ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆ ಘಟಕ ದ ಉಪಾಧ್ಯಕ್ಷೆ ಲಿಜಿ ಜಾನ್ಸನ್, ಜೇಮ್ಸ್ ನೆಲ್ಲಿಕುನ್ನಲ್, ಮನೋಜ್ ಪಟ್ಟೆರಿಲ್, ಡ್ಯಾನಿಶ್ ಉಜಿರೆ, ಸನ್ನಿ ಬೆಳಾಲ್, ಚೆರಿಯನ್, ಶೋಭಾ ಕೊಲ್ಲಿಯಿಲ್, ಬಿಂದು , ರಿನ್ಸ್ ಉಜಿರೆ ಮತ್ತು ಪಾಲನಾ ಸಮಿತಿ ಎಲ್ಲಾ ಭಕ್ತ ವೃಂದದವರು ಉಪಸ್ಥಿತರಿದ್ದರು.

Related posts

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ವಾರ್ಷಿಕ ವ್ಯವಹಾರ ರೂ.300 ಕೋಟಿ – ಲಾಭ ರೂ.1.13 ಕೋಟಿ – ಶೇ.16 ಡಿವಿಡೆಂಟ್

Suddi Udaya

ಕಲ್ಮಂಜ ಹಾಲು ಉತ್ಪಾದಕರ ಸಹಕಾರಿ ಸಂಘ: ಅಧ್ಯಕ್ಷರಾಗಿ ವಿಜಯ ಕುಮಾರ್, ಉಪಾಧ್ಯಕ್ಷರಾಗಿ ಕುಸುಮಾ ಅವಿರೋಧ ಆಯ್ಕೆ

Suddi Udaya

ಜು.2: ಬೆಳ್ತಂಗಡಿ ರೋಟರಿ ಕ್ಲಬ್‌ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯ 3ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ

Suddi Udaya

ಅಗ್ರಿಲೀಫ್ ಮುಕುಟಕ್ಕೆ ಮತ್ತೊಂದು ಗರಿ : ರಾಷ್ಟ್ರ ಮಟ್ಟದ ಸ್ಪರ್ಧೆ -10ಲಕ್ಷ ನಗದು ಪ್ರಶಸ್ತಿ

Suddi Udaya

ಸೋಣಂದೂರು ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಸೋಣಂದೂರು ಶಾಲೆಗೆ ಲ್ಯಾಪ್‌ಟಾಪ್ ಕೊಡುಗೆ

Suddi Udaya
error: Content is protected !!