ಉಜಿರೆ: ಉಮೇಶ್ ಮುಂಡತ್ತೋಡಿ ರವರ ಮನೆಗೆ ಬಿಜೆಪಿ ಎಸ್.ಸಿ ಮೋರ್ಚಾದ ಪದಾಧಿಕಾರಿಗಳ ಭೇಟಿ

Suddi Udaya

ಉಜಿರೆ: ಇತ್ತೀಚೆಗೆ ಸುರಿದ ವಿಪರೀತ ಗಾಳಿ ಮಳೆಗೆ ಉಜಿರೆ ಗ್ರಾಮದ ಉಮೇಶ್ ಮುಂಡತ್ತೋಡಿ ರವರ ಮನೆ ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿತ್ತು.

ತೀರ ಬಡ ಕುಟುಂಬದ ಈ ಮನೆಗೆ ಬೆಳ್ತಂಗಡಿ ಬಿಜೆಪಿ ಎಸ್. ಸಿ ಮೋರ್ಚಾದ ಅಧ್ಯಕ್ಷ ಈಶ್ವರ್ ಬೈರ, ಜಿಲ್ಲಾ ಉಪಾಧ್ಯಕ್ಷ ರಾಘವ ಕಲ್ಮಂಜ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಂದ್ರಕಲಾ, ಪ್ರಭಾರಿ ಸದಾಶಿವ ನೆಲ್ಲಿಕಾರ್, ಜಿಲ್ಲಾ ಕಾರ್ಯದರ್ಶಿ ವಿನಯ್ ಸಾಲ್ಯಾನ್, ಬೆಳ್ತಂಗಡಿ ಎಸ್. ಸಿ ಮೋರ್ಚಾ ಪ್ರದಾನ ಕಾರ್ಯದರ್ಶಿಗಳಾದ ಪ್ರೇಮಚಂದ್ರ ಲಕ್ಷ್ಮಣ ಜಿ ಎಸ್, ಮೋರ್ಚಾ ಉಪಾಧ್ಯಕ್ಷ ರಾಮು ಪಡoಗಡಿ ಭೇಟಿ ನೀಡಿದರು.

ನೆರೆಮನೆಯಲ್ಲಿ ಆಶ್ರಯ ಪಡೆದಿರುವ ಈ ಬಡ ಕುಟುಂಬಕ್ಕೆ ಎಸ್. ಸಿ. ಮೋರ್ಚಾದ ಅಧ್ಯಕ್ಷ ಈಶ್ವರ ಬೈರ ಇವರ ನೇತೃತ್ವದಲ್ಲಿ 50 ಕೆ. ಜಿ ಆಕ್ಕಿ ನೀಡಲಾಯಿತು.

Leave a Comment

error: Content is protected !!