ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಧರ್ಣಪ್ಪ ಪೂಜಾರಿ ನಿಧನ

Suddi Udaya

ಅಳದಂಗಡಿ: ಕಳೆದ ಹದಿನೈದು ದಿನಗಳ ಹಿಂದೆ ಆಲಡ್ಕದಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಧರ್ಣಪ್ಪ ಪೂಜಾರಿ (65 ವ) ಇಂದು ಜುಲೈ29 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ತೆಂಕಕಾರಂದೂರು ಗ್ರಾಮದ ಮಿತ್ತಕೋಡಿ ನಿವಾಸಿಯಾದ ಇವರು ಎಲ್ಲರಲ್ಲೂ ಉತ್ತಮ ಒಡನಾಟ ಹೊಂದಿದ್ದರು. ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ವೇಣೂರು ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮೃತರು ಪತ್ನಿ ಲೀಲಾವತಿ, ಸುದೀಶ್ ಸಾಲ್ಯಾನ್,
ಸುಕೇಶ್ ಸಾಲ್ಯಾನ್,ಸುಪ್ರಿತಾ
ಸೊಸೆ ವನಿತಾ,ಮೊಮ್ಮಗಳು ವೈಶ್ವಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!