ಆ.4 ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ

Suddi Udaya

ಕಲ್ಮಂಜ: ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕದಲ್ಲಿ ಇದೇ ಬರುವ ಆ. 4ರಂದು ಆಟಿ ಅಮಾವಾಸ್ಯೆಯ ಪ್ರಯುಕ್ತ ಬೆಳಗ್ಗೆ 6 ಗಂಟೆಗೆ ತೀರ್ಥಸ್ನಾನ ಆರಂಭಗೊಳ್ಳಲಿದೆ. ಅಮಾವಾಸ್ಯೆ ದಿನ ಸದಾಶಿವೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಲಿದೆ

ಆ 9ರಂದು ನಾಗರಪಂಚಮಿಯ ಪ್ರಯುಕ್ತ ,ನಾಗ ದೇವರಿಗೆ ತಂಬಿಲಸೇವೆ ಮತ್ತು ಪಂಚಾಮೃತ ಅಭಿಷೇಕ ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ.


ಆ.16 ರಂದು ವರಮಹಾಲಕ್ಷ್ಮಿ ಪೂಜೆ ಬೆಳಗ್ಗೆ 10 ಗಂಟೆಗೆ ಪೂಜೆ ಆರಂಭಗೊಂಡು 11:30ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಎಲ್ಲಾ ಭಗವದ್ಭಕ್ತರು ಶ್ರೀದೇವರ ತೀರ್ಥ ಪ್ರಸಾದ ಸ್ವೀಕರಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲುವಂತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Leave a Comment

error: Content is protected !!