ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತುರ್ತು ಸ್ಪಂದನೆ: ನಡ ಸ.ಹಿ.ಪ್ರಾ. ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯ

Suddi Udaya

ಬೆಳ್ತಂಗಡಿ : ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತುರ್ತು ಸ್ಪಂದಿಸಿ ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯ ಜು. 27 ರಂದು ನಡೆಯಿತು.

ರಾತ್ರಿ ಸುರಿದ ವಿಪರೀತ ಗಾಳಿ ಮಳೆಗೆ ನಡ ಸ.ಹಿ. ಪ್ರಾಥಮಿಕ ಶಾಲೆಯ ಮಾಡಿನ ಸುಮಾರು 150 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದ್ದು ಜು.27 ರಂದು ಶಾಲಾ ಮುಖ್ಯ ಶಿಕ್ಷಕರು ಶಾಲೆಗೆ ಬಂದಾಗ ಕೊಠಡಿಯೊಳಗೆ ನೀರು ತುಂಬಿ ಹರಿಯುತ್ತಿದ್ದನ್ನು ಗಮನಿಸಿ . ತಕ್ಷಣ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರಾದ ಎಸ್.ಡಿ.ಎಮ್.ಸಿ ಅಧ್ಯಕ್ಷ ವಸಂತ್ ರವರಿಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿದರು.

ಈ ವಿಷಯವನ್ನು ಗಮನಿಸಿದ ವಸಂತ ರವರು ತಕ್ಷಣ ಶಾಲೆಗೆ ಭೇಟಿ ನೀಡಿ ಶಾಲಾ ಮುಖ್ಯ ಶಿಕ್ಷಕರು ಸೇರಿ ಕೂಡಲೇ ಕನ್ಯಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಿಳಿಸಿ ಪಂಚಾಯತ್ ಅಧಿಕಾರಿಗಳು ತಕ್ಷಣ ಶಾಲೆಗೆ 150 ರಷ್ಟು ಹಂಚನ್ನು ಶಾಲೆಗೆ ಒದಗಿಸಿ ಶಾಲೆಗೆ ಭೇಟಿ ನೀಡಿದರು.

ನಂತರ ಸ್ವಯಂ ಸೇವಕರಾದ ವಸಂತ್ ರವರು ಘಟಕದ ಸಂಯೋಜಕರಾದ ವಸಂತಿಯವರ ಗಮನಕ್ಕೆ ತಿಳಿಸಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಒಲ್ವಿನ್ ಡಿಸೋಜ, ಎನ್ ಬಿ ಹರಿಶ್ಚಂದ್ರ, ಅರ್ವಿನ್ ಮಿರಾಂದ, ಘಟಕ ಪ್ರತಿನಿಧಿ ಮಂಜುನಾಥ್ ರವರನ್ನು ಒಗ್ಗೂಡಿಸಿಕೊಂಡು ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯಾಚರಣೆ ನಡೆಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾದ ಕಿರಣ್ ರವರು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ, ಸಹ ಶಿಕ್ಷಕರು ಉಪಸ್ಥಿತರಿದ್ದು ಸ್ವಯಂ ಸೇವಕರ ಸೇವೆಗೆ ಬಹಳ ಮೆಚ್ಚುಗೆ ಸೂಚಿಸಿ ಅಭಿನಂದಿಸಿದರು.

Leave a Comment

error: Content is protected !!