ಸುಲ್ಕೇರಿ ಕುಲಾಲ ಕುಂಭಶ್ರೀ ಸಂಘದ ವತಿಯಿಂದ ಕುಲಾಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಸಾಧಕಿ ಪೂರ್ವಿಕ ರಿಗೆ ಸನ್ಮಾನ

Suddi Udaya

ಸುಲ್ಕೇರಿ : ಕುಲಾಲ ಕುಂಭಶ್ರೀ ಸಂಘ ಸುಲ್ಕೇರಿ ಮುಡಿಪಿರೆ ಇದರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಕುಲಾಲ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಅತಿ ಹೆಚ್ಚು ಅಂಕ ಪಡೆದ ಕುಮಾರಿ ಪೂರ್ವಿಕ ಇವರನ್ನು ಸನ್ಮಾನಿಸಲಾಯಿತು.

ಆ ಸಂದರ್ಭದಲ್ಲಿ ಕುಲಾಲ ಕುಂಭಶ್ರೀ ಸಂಘದ ಅಧ್ಯಕ್ಷ ಸದಾನಂದ ಕುಲಾಲ್ ಹಾಗೂ ಉಪಾಧ್ಯಕ್ಷ ರವಿ ಕುಲಾಲ್, ಕಾರ್ಯದರ್ಶೀ ಸುಜಾತಾ ಕುಲಾಲ್, ಜೊತೆ ಕಾರ್ಯದರ್ಶಿ ಲಲಿತಾ ಕುಲಾಲ್, ಕೋಶಾಧಿಕಾರಿ ದೇವದಾಸ್ ಕುಲಾಲ್ ಹಾಗೂ ಗೌರವ ಸಲಹೆಗಾರರು ಮತ್ತು ಸದಸ್ಯರು ಉಪಸ್ಥಿತರಿದ್ದರು .

ರೋಹಿತ್ ಕುಲಾಲ್, ಅಶ್ವಿತ್ ಕುಲಾಲ್, ದೀಪಕ್ ಕುಲಾಲ್ ಪ್ರಾರ್ಥಿಸಿದರು. ಸುಜಾತಾ ಕುಲಾಲ್ ವರದಿ ವಚನ ಹಾಗೂ ಸ್ವಾಗತಿಸಿದರು. ದೇವದಾಸ್ ಕುಲಾಲ್ ಧನ್ಯವಾದವಿತ್ತರು.

Leave a Comment

error: Content is protected !!