ಬೆಳ್ತಂಗಡಿಯಲ್ಲಿ ಮಳೆ ಅವಾಂತರ, ವೇಣೂರಿನಲ್ಲಿ ಧರೆ ಕುಸಿತ, ಹಲವು ಕಾರುಗಳಿಗೆ ಹಾನಿ

Suddi Udaya

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜೊತೆಗೆ ಘಟ್ಟದ ಮೇಲಿನ ತಾಲೂಕುಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ವೇಣೂರಿನ ಪಂಚಾಯತ್ ಎದುರಿನಲ್ಲಿರುವ ಧರೆ ಜು.30ರಂದು ಮಧ್ಯಾಹ್ನ ಸುಮಾರಿಗೆ ಕುಸಿತ ಸಂಭವಿಸಿದೆ.

ವೇಣೂರಿನಲ್ಲಿ ಹೆಚ್ಚಿನವರು ಕಾರು ಬೈಕುಗಳನ್ನು ಈ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡುತ್ತಿದ್ದರು. ಇಂದು ಕೂಡ ಕೆಲವು ಕಾರುಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಧರೆ ಕುಸಿಯುವ ಸಂದರ್ಭದಲ್ಲಿ ಕೆಲವು ವಾಹನಗಳು ಮಾತ್ರ ಇದ್ದವು.

ವಾಹನಗಳ ಮೇಲೆ ಕಲ್ಲು ಮಣ್ಣು ಬೀಳದೆ, ವಾಹನಗಳನ್ನು ದೂಡಿಕೊಂಡೇ ಧರೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿ ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ.

ಇಗಾಗಲೇ ಪಂಚಾಯತ್ ಆಡಳಿತ ವರ್ಗ ಪರಿಶೀಲನೆ ನಡೆಸಿದ್ದಾರೆ.

Leave a Comment

error: Content is protected !!