ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸೇತುವೆಯಿಲ್ಲದೆ ಶಿಶಿಲ- ಒಟ್ಲ ಭಾಗದ ಜನರಿಗೆ ಸಂಕಷ್ಟ: ಸೇತುವೆ ನಿರ್ಮಾಣಕ್ಕೆ ಒಟ್ಲ ಭಾಗದ ಜನರ ಒತ್ತಾಯ

Suddi Udaya

ಶಿಶಿಲ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಒಟ್ಲ ಶಿಶಿಲ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಒಟ್ಲ ಭಾಗದ ಜನರು ಶಿಶಿಲಕ್ಕೆ ಬರಲು ಈ ದಾರಿಯನ್ನು ಅವಲಂಬಿಸಿದ್ದು ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.

ಮೊನ್ನೆಯಿಂದ ಸುರಿಯುವ ಮಳೆಗೆ ಒಟ್ಲ ಪರಿಸರದ ಜನರು ಹೊರಗೆ ಬಾರದ ಸ್ಥಿಯಲ್ಲಿದ್ದಾರೆ. ಸೇತುವೆಯಿಲ್ಲದೆ ಒಟ್ಲ ಭಾಗದ ಜನರು ಪರದಾಡುವಂತೆ ಆಗಿದೆ. ಇಲ್ಲಿಯ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಸೇತುವೆ ನಿರ್ಮಿಸಿ ಕೊಡಬೇಕೆಂದು ದಿವಾಕರ್ ಒಟ್ಲ ಒತ್ತಾಯಿಸಿದ್ದಾರೆ.

Leave a Comment

error: Content is protected !!