ಮಂಗಳೂರು: ಮಂಗಳೂರಿನಲ್ಲಿ ಜಿಯೋ ತಂಡವು ಜಿಯೋ ಭಾರತ ಮೊಬೈಲನ್ನು ಮಾರುಕಟ್ಟೆಗೆ ಪರಿಚಯಿಸಿತು. ಇನ್ನು ಜಿಯೋ ಭಾರತ್ 4g ಮೊಬೈಲ್ ಕೇವಲ 999 ಕ್ಕೆ ಸಿಗಲಿದೆ.
ಜಿಯೋ ಸೆಂಟರಿನ ಮ್ಯಾನೇಜರ್ ಹರೀಶ್ ಪಾಟಾಳಿ, ಅಧಿಕಾರಿ ಅರುಣ್ ಮತ್ತು ಸಿಬ್ಬಂದಿಗಳಾದ ಶಿವನಂದನ್, ರಘು ಅರ್ಜುನ್, ಕೌಶಿಕ್ , ಪ್ರಕಾಶ್, ಮಹೇಶ್, ಹಾಗೂ ಇತರರು ಪಾಲ್ಗೊಂಡು ಶ್ರೀ ಕದ್ರಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಪೂಜೆಯನ್ನು ಮಾಡುವುದರೊಂದಿಗೆ ಮೊಬೈಲಿನ ಅನಾವರಣಗೊಳಿಸಲಾಯಿತು.
ಮಂಗಳೂರಿನ ಮೊಬಿಲಿಟಿ ತಂಡ ಹಾಗೂ ಫೈಬರ್ ತಂಡ ಮತ್ತು ಎಚ್ ಆರ್ ತಂಡದೊಂದಿಗೆ ಬೈಕ್ ರ್ಯಾಲಿ ನಡೆಸಲಾಯಿತು. ನಂತರ ಕೆಎಂಸಿ ಬ್ಲಡ್ ಬ್ಯಾಂಕಿನಲ್ಲಿ ಬ್ಲಡ್ ಡೊನೇಷನ್ ಕ್ಯಾಂಪ್ ನಡೆಸಲಾಯಿತು.
ಕೆ ಎಂ ಸಿ ಡಾಕ್ಟರ್ ಶೆರ್ಲಿ, ಬ್ಲಡ್ ಬ್ಯಾಂಕಿನ ಮ್ಯಾನೇಜರ್ ಭವಾನಿ ಶಂಕರ್ ಮತ್ತು ವಲಯ ಎಚ್ ಆರ್ ಅಧಿಕಾರಿ ಉದಯ್ ಶೆಣೈ ಮತ್ತು ಎಚ್ ಆರ್ ತಂಡ, ಫೈಬರ್ ಮ್ಯಾನೇಜರ್ ಶರತ್ ಮತ್ತು ತಂಡ , ಮೊಬೈಲಿಟಿ ಮಂಗಳೂರು ಮ್ಯಾನೇಜರ್ ಕೌಶಿಕ್ ಮತ್ತು ತಂಡ , ಮತ್ತು O&M & Network ತಂಡದ ಸಿಬ್ಬಂದಿಗಳೊಂದಿಗೆ ಉದ್ಘಾಟನೆಯನ್ನು ನಡೆಸಲಾಯಿತು.
ಸಂಸ್ಥೆಯ ಎಲ್ಲಾ ವಿಭಾಗದ ಸಿಬ್ಬಂದಿಗಳು ರಕ್ತದಾನವನ್ನು ಮಾಡಿದರು. ನಂತರ ಒಂದು ಬಡ ಕುಟುಂಬದ ಮಹಿಳೆ ಶ್ರೀಮತಿ ಕಮಲ ಇವರಿಗೆ ಕಂಪನಿಯ ಕಡೆಯಿಂದ ಉಚಿತವಾಗಿ ಮೊಬೈಲನ್ನು ಸಮಾಜ ಸೇವಕಿಯಾದ ಶ್ರೀಮತಿ ಸಾರಿಕಾ ಅವಿನಾಶ್ ಹಸ್ತಾಂತರಿಸಿದರು.












