September 6, 2026
ಗ್ರಾಮಾಂತರ ಸುದ್ದಿ

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

ನಡ: ಇಲ್ಲಿಯ ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ಶ್ಯಾಮಸುಂದರ್ ಅವರ ಮನೆಯ ಬಳಿಯಲ್ಲಿ ರಬ್ಬರ್ ತೋಟದ ಮೂಲಕ ಮಳೆ ನೀರು ಹರಿದು ಬಂದು ಗುಡ್ಡ ಕುಸಿತಕ್ಕೊಳಗಾಗಿದ್ದು, ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿದೆ. ಇದರಿಂದಾಗಿ ಮನೆಗೆ ಅಪಾಯವಾಗಬಹುದೆಂಬ ಭೀತಿ ಎದುರಾಗಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಸಂಜೆ ಮನೆಯ ಸಮೀಪ ಎತ್ತರ ಪ್ರದೇಶದಲ್ಲಿರುವ ರಬ್ಬರ್ ತೋಟದಿಂದ ಮಳೆ ನೀರು ರಭಸವಾಗಿ ಹರಿದು ಕೆಳಗೆ ಬಂದಿದೆ. ಇದರಿಂದ ಮನೆಯ ಸಮೀಪದ ಗುಡ್ಡ ಕುಸಿತಗೊಂಡು ಮಣ್ಣು ಸಹಿತ ನೀರು

ಮನೆಯ ಅಂಗಲದವರೆಗೆ ಬಂದಿದೆ. ರಬ್ಬರ್ ತೋಟದಿಂದ ಮಣ್ಣು ಸಹಿತಿ ನೀರು ಬರುತ್ತಿರುವುದರಿಂದ ರಬ್ಬರ್ ಮರಗಳಿಗೆ ಸಮಸ್ಯೆ ಕಾಡಿದೆ. ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿ ಹಾನಿ ಉಂಟಾಗಿದೆ. ರಬ್ಬರ್ ತೋಟ ಎತ್ತರದಲ್ಲಿದ್ದು, ಒಮ್ಮೆಲೆ ನೀರು ಹರಿದು ಬಂದು ಈ ಘಟನೆ ನಡೆದಿದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದ್ದಾರೆ.

Related posts

ಕಳೆಂಜ: ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಧನಂಜಯ ಗೌಡ ಆಯ್ಕೆ

Suddi Udaya

ದಯಾ ವಿಶೇಷ ಶಾಲೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Suddi Udaya

ದೇಶ ಕಂಡ ಅತ್ಯುತ್ತಮ ಸಂದೀಯ ಪಟು, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ: ರಕ್ಷಿತ್ ಶಿವರಾಮ್

Suddi Udaya

ನಾರಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ರೂ. 9.5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಬಲ್ಯೋಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ

Suddi Udaya

ಬೆಳ್ತಂಗಡಿ: ತಾಲೂಕು ಯುವಬಿಲ್ಲವ ವೇದಿಕೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya
error: Content is protected !!