September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮರೋಡಿ-ಪೆರಾಡಿ ಗ್ರಾಮಗಳಲ್ಲಿ ಮಹಾಮಳೆಗೆ ಅನಾಹುತ, ಅಗತ್ಯ ಕ್ರಮ ಕೈಗೊಂಡ ಪಂಚಾಯತ್ ಆಡಳಿತ

ಮರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರೋಡಿ ಮತ್ತು ಪೆರಾಡಿ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಎಲ್ಲೆಡೆ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ, ಮರಗಳು ಧರೆಗೆ ಉರುಳಿದ್ದು, ರಸ್ತೆಗಳಿಗೆ ಹಾನಿ, ಕೃಷಿ ನಾಶದಂತಹ ಅನಾಹುತಗಳು ಸಂಭವಿಸಿವೆ.

ಮರೋಡಿ ಗ್ರಾಮದ ಶಾಂತಿ ನಗರದಿಂದ ದೇರಾಜೆ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತ, ಕಾಯೇರುಬೈಲು ರಸ್ತೆಯ ರಾಗಿಮೇಲು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

ಪಾಣಾಲು ಸೇತುವೆಗೆ ಹಾನಿ, ಕೋಂಟಡ್ಕ ಎಂಬಲ್ಲಿ ಮೋರಿ ಕುಸಿತ, ಉಳಗುಡ್ಡೆ ಎಂಬಲ್ಲಿ ಮರಬಿದ್ದು ವಿದ್ಯುತ್ ಲೈನಿಗೆ ಹಾನಿ, ಕಲ್ಲಟ್ಟ ಎಂಬಲ್ಲಿ ಕಾಲುಸಂಖ ಕೊಚ್ಚಿ ಹೋಗಿ ಸಂಪರ್ಕ ಕಡಿತ, ಪೆರಾಡಿ ಗ್ರಾಮದ ಬೀರೊಟ್ಟು ಎಂಬಲ್ಲಿ ರಸ್ತೆಯ ತಡೆಗೋಡೆ ಕೊಚ್ಚಿ ಹೋಗಿದ್ದು, ನೆಲ್ಲಿಂಗೇರಿ ಕ್ರಾಸ್ ಬಳಿ ರಸ್ತೆ ಸಂಚಾರಕ್ಕೆ ಅಡಚಣೆಯಂತಹ ಪ್ರದೇಶಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಬುಣ್ಣಾನ್, ಪಿಡಿಒ ಆಶಾಲತಾ ಎಚ್, ಸದಸ್ಯರಾದ ಪದ್ಮಶ್ರೀ ಜೈನ್, ಅಶೋಕ ಪೂಜಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡರು.

Related posts

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ  ಫಲಿತಾಂಶ

Suddi Udaya

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

Suddi Udaya

ರೋಗಿಗಳ ಪಾಲಿನ ಭರವಸೆಯ ಹೊಂಗಿರಣ ಡಾ. ಪ್ರಭಾಚಂದ್ರ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

Suddi Udaya

ಜನಪದ ಗೀತಾಗಾಯನ ಸ್ಪರ್ಧೆ: ವಾಣಿ ಪದವಿ ಪೂರ್ವ ಕಾಲೇಜಿಗೆ ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ : ವಕೀಲರು ವಿನೋದರ್ ಕುಂಬಾರ ಇವರ ಸಾರಥ್ಯದಲ್ಲಿ ‘ವಿನು ಪೋಟರಿ ಸ್ಟುಡಿಯೋ’ ಇದರ ಪೋಸ್ಟರ್ ಬಿಡುಗಡೆ

Suddi Udaya
error: Content is protected !!