ಮನೆ ಒಂದು ಭಾಗ ಕುಸಿದು ಬಿದ್ದು ಕಳಿಯ ಮುಡಾಯಿಪಲ್ಕೆ ಅಣ್ಣು ರವರಿಗೆ ಗಾಯ

Suddi Udaya

ಬೆಳ್ತಂಗಡಿ : ಆ.1ರಂದು ಸುರಿದು ಭಾರೀ ಮಳೆಗೆ ಕಳಿಯ ಗ್ರಾಮ ಖುಷಿದ ಮುಡಾಯಿಪಲ್ಕೆ ಅಣ್ಣು ಎಂಬವರ ಮನೆಯ ಒಂದು ಭಾಗ ಕುಸಿತವಾಗಿ ಅವರ ತಲೆಗೆ ಗಂಭೀರ ಗಾಯವಾಗಿದೆ.

ಮಧ್ಯಾಹ್ನ ಈ ಘಟನೆ ನಡೆದಿದ್ದು ಅಣ್ಣು ಅವರು ಊಟ ಮುಗಿಸಿ ಮಲಗಿದ್ದರು. ಆಗ ಈ ಘಟನೆ ನಡೆದಿದೆ. ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ನೇವಿಲ್ ಸ್ಟೀವನ್ ಮೊರಾಸ್ ಅವರು ಘಟನೆ ಯನ್ನು ಕಳಿಯ ಗ್ರಾಮಾಧಿಕಾರಿ ಪ್ರಥ್ವಿ ಶೆಟ್ಟಿ ಅವರಿಗೆ ವಿಷಯ ತಿಳಿಸಿದ್ದು, ತಕ್ಷಣ ಗಾಯಗೊಂಡ ಅಣ್ಣು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್,ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ, ಸದಸ್ಯರಾದ ಮೋಹಿನಿ,ವಿಜಯ ಕುಮಾರ್ ಕೆ, ಮರೀಟಾ ಪಿಂಟೋ,ಪುಷ್ಪಲತಾ, ಶ್ವೇತಾ, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ ಹಾಗೂ ಕಾರ್ಯದರ್ಶಿ ಕುಂಞ್ಞ ಕೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

error: Content is protected !!