24 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೊಯ್ಯೂರು: ಆದೂರ್ ಪೆರಾಲ್ ಉತ್ಸಾಹಿ ಸ್ವಯಂ ಸೇವಕ ತಂಡದಿಂದ ಶ್ರಮದಾನ

ಕೊಯ್ಯೂರು : ಉತ್ಸಾಹಿ ಸ್ವಯಂ ಸೇವಕ ತಂಡ ಆದೂರ್ ಪೆರಾಲ್ ಕೊಯ್ಯೂರು ಇದರ ಸದಸ್ಯರಿಂದ ಶ್ರಮದಾನದ ಮೂಲಕ ಭೂಕುಸಿತ ಸಂಭವಿಸಿ ತೋಡಿಗೆ ಬಿದ್ದಿರುವ ಮಣ್ಣು ಮತ್ತು ಇನ್ನಿತರ ವಸ್ತುಗಳ ತೆರವುಗೊಳಿಸುವ ಕಾರ್ಯಕ್ರಮ ನಡೆಯಿತು.


ಕೊಯ್ಯೂರು ನಾಗನೋಡಿ ಹೇಮಂತ ಗೌಡರ ಮನೆಯ ಹಿಂಭಾಗದಲ್ಲಿ ವಿಪರೀತ ಮಳೆಯಿಂದ ಭೂಕುಸಿತ ಉಂಟಾಗಿ ಮಣ್ಣು ಹಾಗೂ ಮರಗಳು ನೀರು ಹರಿಯುವ ತೋಡಿಗೆ ಬಿದ್ದು ತುಂಬಾ ಸಮಸ್ಯೆಯಗಿತ್ತು. ಈ ಸಮಸ್ಯೆಯನ್ನು ಶ್ರೀ ಕೃಷ್ಣ ಭಜನಾ ಮಂಡಳಿ ಆದೂರ್ ಪೆರಾಲ್, ಕೊಯ್ಯೂರು ಇದರ ಸಹಕಾರದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಉತ್ಸಾಹಿ ಸ್ವಯಂ ಸೇವಕರ ತಂಡದ ಸದಸ್ಯರು ಒಟ್ಟಾಗಿ ಸೇರಿ ಇಂದು ಸತತ 7 ಗಂಟೆಗಳ ಕಾಲ ಶ್ರಮದಾನದ ಮೂಲಕ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸಿ ನೀರು ಸುಗಮವಾಗಿ ಹರಿಯುವಂತೆ ಮಾಡಿ ಮುಂದಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟುವಲ್ಲಿ ಯಶಸ್ವಿಯಾದರು.

Related posts

ಇಂದಬೆಟ್ಟು : ಕೋಯನಗರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಝೀನತ್‌ರವರಿಂದ ಜಾರುಬಂಡಿ ಕೊಡುಗೆ

Suddi Udaya

ಬೆಳ್ತಂಗಡಿ: ವಿಶೇಷಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಅಳದಂಗಡಿಯಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 17 ಶಾಖೆ ಉದ್ಘಾಟನೆ ಸಜೀಪಮುನ್ನೂರು ಸಹಕಾರಿ ಸಂಘದಲ್ಲಿ ವಿವಿಧ ಸಾಲ ಸೌಲಭ್ಯ,ಠೇವಣಿ ಮೇಲಿನ ಆಕರ್ಷಕ ಬಡ್ಡಿ ದರಗಳು

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ಗಾರ್ಡನ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ದೈವದ ಆಸನ(ಮುಕ್ಕಾರ್) ಸಮಪ೯ಣೆ: ವಾಸ್ತು ಶಿಲ್ಪಿ ಸುಂದರ ಆಚಾರ್ಯ ಮಡೆಂಜಿಮಾರುರವರಿಗೆ ಕ್ಷೇತ್ರದಿಂದ ಗೌರವಾರ್ಪಣೆ

Suddi Udaya
error: Content is protected !!