ಕೊಯ್ಯೂರು: ಮಲೆಬೆಟ್ಟುನಲ್ಲಿ ಬೈಕ್ ಗೆ ಆಟೋ ರಿಕ್ಷಾ ಡಿಕ್ಕಿ: ಬೈಕ್ ಸವಾರನಿಗೆ ಗಾಯ

Suddi Udaya

ಕೊಯ್ಯೂರು: ಇಲ್ಲಿಯ ಮಲೆಬೆಟ್ಟು ಎಂಬಲ್ಲಿ ಬೈಕ್ ಹಾಗೂ ಆಟೋ ರಿಕ್ಷಾ ಡಿಕ್ಕಿ ಯಾಗಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ಇತ್ತೀಚೆಗೆ ವರದಿಯಾಗಿದೆ.

ಬೆಳ್ತಂಗಡಿ ಉಮೇಶ್ ಗೌಡ (41 ವರ್ಷ), ರವರ ದೂರಿನಂತೆ ಜು.31 ರಂದು ಮಧ್ಯಾಹ್ನ, ಅವರ ದ್ವಿಚಕ್ರ ವಾಹನದಲ್ಲಿ ಅವರ ಹೆಂಡತಿ ವಿನೋದರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು, ಬೆಳ್ತಂಗಡಿಯಿಂದ ಬಂದಾರು ಕಡೆಗೆ ತೆರಳುತ್ತಾ, ಕೊಯ್ಯುರು ಗ್ರಾಮದ ಮಲೆಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ, ಉಮೇಶ್ ಗೌಡರವರು ಮುಂದಿನಿಂದ ಹೋಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಸೋಮಶೇಖರ್ ರವರು, ದುಡುಕುತನದಿಂದ ಚಲಾಯಿಸಿ ಆಟೋರಿಕ್ಷಾ ಉಮೇಶ್ ಗೌಡ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿರುತ್ತದೆ.

ಪರಿಣಾಮ ದ್ವಿಚಕ್ರ ಸವಾರರು ವಾಹನ ಸಮೇತ ಇಬ್ಬರು ರಸ್ತೆಗೆ ಬಿದ್ದು ಉಮೇಶ್ ಗೌಡರವರು ಗಾಯಗೊಂಡಿದ್ದು, ಅವರ ಹೆಂಡತಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಉಮೇಶ್ ಗೌಡ ಉಜಿರೆಯ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದವರು, ನಂತರ ಗಾಯ ಉಲ್ಬಣಗೊಂಡು ಗುರುವಾಯನಕೆರೆಯ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 82/2024 ಕಲಂ: 281, 125(a), BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Comment

error: Content is protected !!