ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ಟಾಪ್ 10 ರಲ್ಲಿ ಜೆ ಸಿ ಐ ಬೆಳ್ತಂಗಡಿ ಮಂಜಶ್ರೀ

Suddi Udaya

ಬೆಳ್ತಂಗಡಿ :ಜೆಸಿಐ ಭಾರತದ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಸಮ್ಮೇಳನವು ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಪ್ರಸ್ತಕ ವರ್ಷದಲ್ಲಿ ಜೆಸಿಐ ಭಾರತಕ್ಕೆ ಸಲ್ಲಿಸಿದ ಸದಸ್ಯತ್ವ ಶುಲ್ಕ ಮತ್ತು ಜೆಸಿಐ ಭಾರತದ ಫೌಂಡೇಶನ್ ಗೆ ನೀಡಿದ ದೇಣಿಗೆ ಹಾಗೂ ಹೊಸ ಸದಸ್ಯರ ಸೇರ್ಪಡೆ ಮತ್ತು ನಡೆಸಿದ ಓರಿಯೆಂಟಷನ್ ಕಾರ್ಯಕ್ರಮವನ್ನು ಆದರಿಸಿ ಕೊಡ ಮಾಡುವ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಪ್ರಶಸ್ತಿಯಲ್ಲಿ 10 ನೇ ಸ್ಥಾನದ ಪ್ರಶಸ್ತಿಗೆ ಭಾಜನವಾಗಿದೆ.

ವಲಯಧ್ಯಕ್ಷರಾದ ಗಿರೀಶ್ ಎಸ್ ಪಿ ಯವರಿಂದ
ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕ್ರಿಯಾಶೀಲ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ರವರು ಸದಸ್ಯರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ
ಘಟಕದ ನಿಕಟಪೂರ್ವಧ್ಯಕ್ಷರಾದ ಶಂಕರ್ ರಾವ್,
ಪೂರ್ವ ಅಧ್ಯಕ್ಷರುಗಳಾದ ಸಂತೋಷ್ ಪಿ ಕೋಟ್ಯಾನ್, ಪ್ರಶಾಂತ್ ಲೈಲಾ, ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಚಂದ್ರಹಾಸ್, ಶೈಲೇಶ್, ಸಂಯೋಜಕರಾದ ರಜತ್, ಲೇಡಿ ಜೆಸಿ ಸಂಯೋಜಕರಾದ Jc ಶ್ರುತಿ ರಂಜಿತ್, ಅಮೃತಾ ಎಸ್ ಕೋಟ್ಯಾನ್ ರವರು ಭಾಗವಹಿಸಿದರು.

Leave a Comment

error: Content is protected !!