ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ಮಹಿಳಾ ವೇದಿಕೆಯಿಂದ ಆಟಿಕೂಟ ಆಚರಣೆ

Suddi Udaya

ಬೆಳ್ತಂಗಡಿ:ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ವೇದಿಕೆಯ ವತಿಯಿಂದ ಆ.4 ರಂದು ಉಜಿರೆಯ ಅರಿಪಾಡಿ ಮಠದ ಕಲಾವೇದಿಕೆಯಲ್ಲಿ ಆಟಿಕೂಟವನ್ನು ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿ ಕೂಟ ಮಹಾ ಜಗತ್ತಿನ ಅಧ್ಯಕ್ಷ ವಿಶ್ವನಾಥ ಹೊಳ್ಳರವರು ದೀಪ ಬೆಳಗಿಸಿ ಆಟಿಕೂಟಕ್ಕೆ ಚಾಲನೆ ನೀಡಿದರು.

ನಂತರ ಆಟಿಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಹಿಳಾ ವೇದಿಕೆಯ ಸದಸ್ಯರಾದಂತಹ ವಿದ್ಯಾಶ್ರೀ ಅಡೂರ್ ಅವರು ಸ್ಪರ್ಧೆಗಳನ್ನು ನಿರ್ವಹಿಸಿದರು. ಮಹಿಳಾ ವೇದಿಕೆಯ ಅನೇಕ ಸದಸ್ಯರು ತುಳುನಾಡಿನ ಖಾದ್ಯಗಳನ್ನು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಕಾರ್ಯಕ್ರಮದಲ್ಲಿ ಹಂಚಿಕೊಂಡು ತಿಂದು,ತಿನಿಸಿ ಸಂಭ್ರಮ ಪಟ್ಟರು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವನಾಥ ಹೊಳ್ಳ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಜಯಂತಿ ಪುರಂದರ್,ಕೇಂದ್ರ ಖಜಾಂಜಿ ವಾಸುದೇವ ಸೋಮಯಾಜಿ,ಮಹಿಳಾ ವೇದಿಕೆಯ ಅಧ್ಯಕ್ಷೆ ನಳಿನಿ ಹೊಳ್ಳ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಇಂದಿರಾ ಹೊಳ್ಳ ಪ್ರಾರ್ಥನೆ ಹಾಡಿದರು.ಸುಜಾತ ರಾವ್ ಸ್ವಾಗತಿಸಿದರು,ಮಹಿಳಾ ವೇದಿಕೆಯ ಕಾರ್ಯದರ್ಶಿ ಅಕ್ಷತಾ ಅಡೂರ್ ನಿರೂಪಿಸಿದರು.ಗೀತಾ ವಿ ಸೋಮಯಾಜಿ ಆಟಿಯ ಮಹತ್ವವನ್ನ ವಿವರಿಸಿದರು.ಅಖಿಲ ಪ್ರಕಾಶ್ ನಾರಾಯಣ್ ಖಾದ್ಯಗಳನ್ನು ತಯಾರಿಸಿ ತಂದವರ ಪಟ್ಟಿಯನ್ನು ಓದಿ,ಆಶಾ ಅಡೂರ್ ವಂದಿಸಿದರು

ಹೆಚ್ಚಿನ ಸಂಖ್ಯೆಯಲ್ಲಿ ಕೂಟ ಮಹಾಜಗತ್ತಿನ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Leave a Comment

error: Content is protected !!