ಬೆಳ್ತಂಗಡಿ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿ ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ತಂಗಡಿ ಯಮಟೋ ಶೋಟೋಕಾನ್ ಕರಾಟೆ ಮುಖ್ಯ ಗುರು ಶಾಜು ಮುಲಾವನ ಹಾಗೂ ಶಿಕ್ಷಕರಾದ ಅಶೋಕ್ ಆಚಾರ್ಯ ಇವರಿಂದ ತರಬೇತಿ ಪಡೆಯುತ್ತಿರುವ ಸಂಜನಾ ಎಂ.ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದುರ್ಗಾದಾಸ್ ಮತ್ತು ಶ್ರೀಮತಿ ರೇವತಿ ಇವರ ಪುತ್ರಿಯಾಗಿರುತ್ತಾರೆ.












