25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

ಬೆಳ್ತಂಗಡಿ: ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಚಾಟಿಂಗ್ ಮೂಲಕ ವಿಶ್ವಾಸ ಗಳಿಸಿ, ಯುವಕನೋರ್ವನಿಂದ ರೂ.6.96 ಲಕ್ಷ ಪಡೆದು ವಂಚಿಸಿದ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ.


ಬರಾಯ ಕನ್ಯಾಡಿ ಗ್ರಾಮದ ಗುರಿಪಳ್ಳ ಎನೀರುಪಲ್ಕೆ ನಿವಾಸಿ, ಸತೀಶ್ ಗೌಡ ಎಂಬವರು ವಂಚನೆಗೆ ಒಳಗಾದ ಯುವಕರಾಗಿದ್ದಾರೆ. ಸತೀಶ್ ಗೌಡ ಅವರು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಫೇಸ್‌ಬುಕ್ ಮೂಲಕ ಮಹಿಳೆಯೋರ್ವರ ಪರಿಚಯವಾಗಿತ್ತು. ಈ ಮಹಿಳೆ ಚಾಟಿಂಗ್ ಮೂಲಕ ಸತೀಶ್ ಗೌಡರವರ ವಿಶ್ವಾಸವನ್ನು ಗಳಿಸಿ, ವಿವಿಧ ಕಾರಣಗಳನ್ನು ನೀಡಿ, ಬೇರೆ, ಬೇರೆ ಖಾತೆಗಳಿಗೆ ಒಟ್ಟು ರೂ.6,96,500 ಹಣವನ್ನು ಪಡೆದು ವಂಚಿಸಿರುವುದಾಗಿ ಸತೀಶ್ ಗೌಡ ಅವರು ನೀಡಿದ ದೂರಿನಂತೆ ದ.ಕ.ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ.33/2023 ಕಲಂ : 66(ಅ) 66 (ಆ)ಯಂತೆ ಪ್ರಕರಣ ದಾಖಲಾಗಿದೆ.

Related posts

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

Suddi Udaya

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ದಾಖಲೆ ಸಾಧಿಸಿದ ಪಟ್ರಮೆಯ ಯುವ ಸಂಶೋಧಕ ದೀಪಕ್ ಎ.ಎಸ್.

Suddi Udaya

ನಿಡ್ಲೆ: ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಉಜಿರೆ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಸಚಿವರ ಸಂವಾದ

Suddi Udaya

ಉಜಿರೆ: ಮಿತ್ರ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಶಿರ್ಲಾಲಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya
error: Content is protected !!