28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಹಲ್ಲೆ, ಜೀವ ಬೆದರಿಕೆ ಆರೋಪ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ, ಆರೋಪಿಯು ಬೈದು ಜೀವ ಬೆದರಿಕೆ ಹಾಕಿದ ಘಟನೆ ಆ.6ರಂದು ನಡೆದಿದೆ.

ಘಟನೆ ವಿವರ: ಧರ್ಮಸ್ಥಳ ಗ್ರಾಮದ ಶ್ರೀಮತಿ ತ್ರೇಸ್ಯಮ್ಮ, ರವರ ದೊಡ್ಡ ಮಗಳ ಮಗ ಆರೋಪಿಯಾದ ಪಿಟಿ ಜಾರ್ಜ್ ಯಾನೆ ಪ್ರವೀಣ್ ಎಂಬಾತನು ಆ.06 ರಂದು ರಾತ್ರಿ, ತ್ರೇಸ್ಯಮ್ಮ ಮನೆಗೆ ಆಕ್ರಮ ಪ್ರವೇಶ ಮಾಡಿ, ತ್ರೇಸ್ಯಮ್ಮ ಮಗನನ್ನು ಉದ್ದೇಶಿಸಿ ಮಳೆಯಾಳಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಲು ಮುಂದಾಗಿರುತ್ತಾನೆ. ಈ ವೇಳೆ ತಡೆಯಲು ಮುಂದಾದ ತ್ರೇಸ್ಯಮ್ಮ ಆರೋಪಿಯು ಬೈದು ಹಲ್ಲೆ ನಡೆಸಿರುವುದಾಗಿದೆ. ಬಳಿಕ ತ್ರೇಸ್ಯಮ್ಮ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 59/2024 ಕಲಂ 329 (4).115(2).352.351(2) ಬಿ ಎನ್‌ ಎಸ್‌ ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

Related posts

ಶಿಶಿಲ: ಗುಡ್ಡೆತೋಟ ಮನೆ ಯಮುನಾ ನಿಧನ

Suddi Udaya

ಗುರುವಾಯನಕೆರೆ ಶಕ್ತಿನಗರ ಬಳಿ ಬೈಕ್-ಪಿಕಪ್‌ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು

Suddi Udaya

ಪಿಯುಸಿ ಫಲಿತಾಂಶ: ಸಂಸ್ಕೃತದಲ್ಲಿ ಎಕ್ಸೆಲ್ ಕಾಲೇಜಿನ 114 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಕೆ

Suddi Udaya

ಬೆಳ್ತಂಗಡಿ : ವಿಪರೀತ ಮಳೆಯಾಗುತ್ತಿರುವ ಕಾರಣ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

Suddi Udaya

ಫೆ.3: ಬೆಳ್ತಂಗಡಿ ವಕೀಲರು ಭಗೀರಥ ಜಿ ರವರ ನೋಟರಿ ಕಚೇರಿಯು ಸ್ಥಳಾಂತರಗೊಂಡು ಶುಭಾರಂಭ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮಸಭೆ

Suddi Udaya
error: Content is protected !!