ಕೊಕ್ಕಡ ವಲಯದ ಅನಾರು ಕಾರ್ಯಕ್ಷೇತ್ರದ ದುರ್ಗ ಶ್ರೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಅನಾರು ಕಾರ್ಯಕ್ಷೇತ್ರದ ದುರ್ಗ ಶ್ರೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಳಿಯ ಬೀಡಿನ ಹಿರಿಯರಾದ ದೇವಪಾಲ ಅಜ್ರಿಯವರು ನೆರವೇರಿಸಿ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಪ್ರಬುದ್ಧತೆಯನ್ನು ಹೊಂದಿರುತ್ತಾರೆ ಎಂದರು. ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರಾದ ಸುರೇಂದ್ರರವರು ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಆನಂದ ರವರು ಒಕ್ಕೂಟದ ಉಪಾಧ್ಯಕ್ಷರಾದ ವೇದಾವತಿ ಯವರು ಮೇಲ್ವಿಚಾರಕರಾದ ಭಾಗೀರಥಿ ಮೇಡಮ್ ರವರು ಸೇವಾ ಪ್ರತಿನಿಧಿಗಳಾದ ಚೈತ್ರ ಮತ್ತು ಸುಮಿತ್ರರವರು ಉಪಸ್ಥಿತರಿದ್ದರು. ಜ್ಞಾನವಿಕಾಸಮನ್ವಯ ಅಧಿಕಾರಿಯವರಾದ ಮಧುರ ವಸಂತ್ ರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಯೋಜಕ ಪ್ರೇಮಾವತಿ ಯವರು ಸ್ವಾಗತಿಸಿ ಸದಸ್ಯರಾದ ರೇವತಿಯವರು ಧನ್ಯವಾದ ನೀಡಿದರು,

Leave a Comment

error: Content is protected !!