ಇಳಂತಿಲ: ಡೇನಿತ್ ಸಾಲ್ಯಾನ್ ತೋಟದಲ್ಲಿ ಕಾಳಿಂಗ ಸರ್ಪ ಪತ್ತೆ

Suddi Udaya

ಇಳಂತಿಲ : ಇಳಂತಿಲ ಗ್ರಾಮದ ಮಾಯಿಲ ನಿವಾಸಿ ಡೇನಿತ್ ಸಾಲ್ಯಾನ್ ಅವರ ತೋಟದ ಕೊಕ್ಕೊ ಗಿಡದಲ್ಲಿ ಕಾಳಿಂಗ ಸರ್ಪ ಪತ್ತೆಯಾದ ಘಟನೆ ಆ.11ರಂದು ನಡೆದಿದೆ.

ಈ ಸಂದರ್ಭದಲ್ಲಿ ಸ್ನೇಕ್ ಜಕಾರಿಯ ಅವರು ಜಾಣ್ಮೆಯಿಂದ ಹಿಡಿದು ಗುಂಡ್ಯ ಬಳಿ ಕಾಡಿಗೆ ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಈ ಸಂದರ್ಭದಲ್ಲಿ ಬಂದಾರು ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ಸುದ್ದೆಪ್ಪಿಲ ಮೊಗ್ರು, ಕೆ.ವಿ ಪ್ರಸಾದ್, ಅರಣ್ಯ ಇಲಾಖೆಯ ಅಧಿಕಾರಿ ಜಗದೀಶ್, ಸಿಬ್ಬಂದಿ ಸೇಸಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಸಹಕರಿಸಿದರು.

Leave a Comment

error: Content is protected !!