ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ರೂ. 20 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಆಸ್ಪತ್ರೆಯ ಮೂಲಭೂತ ಸೌಕರ್ಯ ಹಾಗೂ ಉನ್ನತ್ತೀಕರಣ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ರೂ.20 ಲಕ್ಷ ಅನುದಾನ ಮಂಜೂರಾತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಚಾರ್ಮಾಡಿ ಗ್ರಾಮದ ಪ್ರಮುಖರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಿತಾ ಪೂಜಾರಿ ,ಹಾಗೂ ಪ್ರಮುಖರಾದ ಯಶೋಧರ ಚಾರ್ಮಾಡಿ, ಜಾರ್ಜ್‌ ಎಮ್ ವಿ ಚಿಬಿದ್ರೆ, ಸಂಶುದ್ದಿನ್ ಚಾರ್ಮಾಡಿ ,ನಿತಿನ್ ಚಾರ್ಮಾಡಿ ಅನಿಲ್ ಚಾರ್ಮಾಡಿ, ಉಸ್ಮಾನ್ ಚಾರ್ಮಾಡಿ ,ರಮೇಶ್ ಕತ್ತರಿಗುಡ್ಡೆ,ಹರೀಶ್ ದೇವಾಡಿಗ, ಹರೀಶ್ ಪರ್ಲಾಣಿ, ರಘುನಾಥ್ ಗೌಡ ಚಾರ್ಮಾಡಿ, ಇಮ್ರಾನ್ ಚಿಬಿದ್ರೆ, ಅಜೀಜ್ ಚಾರ್ಮಾಡಿ ಉಪಸ್ಥಿತರಿದ್ದರು.

Leave a Comment

error: Content is protected !!