25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ದೇಗುಲದ ಪರಿಸರದಲ್ಲಿ ತಿರುಗಾಡುತ್ತಿದ್ದ ಒಂಟಿ ಮಹಿಳೆಯನ್ನು ಅವರ ಊರಿಗೆ ಕಳುಹಿಸಿ ಮಾನವೀಯತೆ ಮೆರೆದ ಪೋಲೀಸ್ ಇಲಾಖೆ ಹಾಗೂ ಸಮಾಜ ಸೇವಕ ರವಿ ಕಕ್ಕೆಪದವು

ಬೆಳ್ತಂಗಡಿ:ಸುಬ್ರಮಣ್ಯ ದೇವಾಲಯದ ಪರಿಸರದಲ್ಲಿ ತಿರುಗಾಡುತ್ತಿದ್ದ ಒಂಟಿ ಮಹಿಳೆಯನ್ನು ಗುರುತಿಸಿದ ಸಾರ್ವಜನಿಕರು, ಸ್ಥಳೀಯ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿ ಕಕ್ಕೆಪದವು ಇವರಿಗೆ ದೂರವಾಣಿ ಮುಖಾಂತರ ಮಾಹಿತಿಯನ್ನು ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಅವರು ವಿಷಯದ ಗಂಭೀರತೆಯನ್ನು ಅರಿತು ಸುಬ್ರಮಣ್ಯ ಠಾಣೆಗೆ ತೆರಳಿ ಠಾಣಾಧಿಕಾರಿಗಳಿಗೆ ತಿಳಿಸಿರುತ್ತಾರೆ.

ಮಹಿಳಾ ಪೇದೆ, ಪುನೀತ ಇವರನ್ನು ಸ್ಥಳಕ್ಕೆ ಕಳಿಹಿಸಿಕೊಟ್ಟು ಠಾಣಾಧಿಕಾರಿಗಳು ಸಂಬಂಧ ಪಟ್ಟ ಮಹಿಳೆಯನ್ನು ವಿಚಾರಿಸಿ,ಈಕೆ ಮೈಸೂರು ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮದಲ್ಲಿ ವಾಸ್ತವ್ಯ ಇರುವ ಮಹಿಳೆಯೆಂದು ಗುರುತಿಸಿ, ಮಹಿಳಾಪೇದೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಕರೆ ಮಾಡಿ ಈಕೆಯ ಮಾಹಿತಿಯನ್ನು ಕಲೆ ಹಾಕಿದಾಗ ಈಕೆ ಸುಮಾರು 15 ವರ್ಷಗಳಿಂದ ತನ್ನೂರನ್ನು ತೊರೆದು ಅನೇಕ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.ಈಕೆಯ ಸಂಬಂಧಿಕರು ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ವಾಸ್ತವ್ಯ ಇರುವುದನ್ನು ಪತ್ತೆ ಹಚ್ಚಿದ್ದು ಈಕೆಯನ್ನು ಸುಬ್ರಹ್ಮಣ್ಯದಿಂದ ತನ್ನೂರಿಗೆ ಬಸ್ಸನ್ನು ಏರಿಸಿ ಕಳುಹಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿ ಕಕ್ಕೆಪದವು, ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಗಳು ಮತ್ತು ಮಹಿಳಾ ಸಿಬ್ಬಂದಿ, ಸುಬ್ರಮಣ್ಯ ದೇವಳದ ಭದ್ರತಾ ಸಿಬ್ಬಂದಿ ರವೀಶ್ ಕೋಡ್ತಗುಳಿ, ಪುಟ್ಟಣ್ಣ ವಾಲಗದಕೇರಿ,ಆಪತ್ಭಾಂದವ ದೀಪಕ್ ಯುವ ತೇಜಸ್ವು ಸುಬ್ರಹ್ಮಣ್ಯ ಇವರು ಸಹಕರಿಸಿದ್ದಾರೆ.

Related posts

ರೋಟರಿ ಕ್ಲಬ್ ವತಿಯಿಂದ ಬುಹುಮುಖಿ ಸಮಾಜ ಸೇವೆ

Suddi Udaya

ಉಜಿರೆ: ಕುಂಜರ್ಪದಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಉಜಿರೆ: ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಕೃಷಿ ತೋಟಗಳಿಗೆ ಹಾನಿ ಮಾಡುವ ಕಾಡಾನೆಗಳ ತಡೆಗೆ ಅರಣ್ಯ ಇಲಾಖೆಯಿಂದ ಜೋತಾಡುವ ಸೌರ ವಿದ್ಯುತ್ ಬೇಲಿ

Suddi Udaya

ಕಿಲ್ಲೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಹೋರಿ ಸಾವು

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya
error: Content is protected !!